ಸಮಸ್ಯೆ ಬಗೆಹರಿಸಲು 10 ದಿನ ಸಮಯ ಕೊಡಿ : ಕೇಜ್ರಿವಾಲ್

ಸೋಮವಾರ, 30 ಡಿಸೆಂಬರ್ 2013 (09:22 IST)
PR
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮನೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ . ಅವರೆಲ್ಲರ ಸಮಸ್ಯೆ ಬಗೆಹರಿಸಲು 10 ದಿನ ಸಮಯ ಕೊಡಿ ಎಂದು ಕ್ರೇಜಿವಾಲ್‌ ತಿಳಿದ್ದಾರೆ.

ಸುಳ್ಳು ಆಶ್ವಾಸನೆ ನಾನು ನೀಡುವುದಿಲ್ಲ, ನಿಮ್ಮೆಲ್ಲರ ಸಮಸ್ಯೆ ಬಗೆಹರಿಸುತ್ತೆನೆ. ಆದರೆ ಮೊನ್ನೆಯಷ್ಟೆ ನಾನು ಸಿಎಂ ಗದ್ದುಗೆ ಎರಿದ್ದೆನೆ. ನನಗೆ ಎಲ್ಲವನ್ನು ತಿಳಿದುಕೊಳ್ಳಲು ಸಮಯ ಬೇಕು ಎಂದಿದ್ದಾರೆ.

ಘಟನೆ ನಡೆಯಬಾರದೆಂದು ಈ ಕ್ರಮ ಕೈಗೊಳ್ಳಲಾಯಿತು. ದೆಹಲಿ ಮತ್ತು ಉತ್ತರ ಪ್ರದೇಶದ ಪೊಲೀಸರು ಜನರನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದರು.

ಕ್ರೇಜಿವಾಲ್‌ ಮನೆಯೆದುರು ಸಾವಿರಾರು ಜನರು ಬರುತ್ತಿರುವ ಕಾರಣ, ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಪೋಲಿಸರನ್ನು ಕರೆಸಿದ್ದರು.

ವೆಬ್ದುನಿಯಾವನ್ನು ಓದಿ