ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ತನ್ನ ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ಮಯೂರ್ ವಿಹಾರ್ ಬಳಿ ಪತಿ ಶಿವಪ್ರಸಾದ್ ಮೇಲೆ ಪತ್ನಿ ಅಂಜು ಮತ್ತು ಅವಳ ಪ್ರಿಯಕರ ಸೇರಿದಂತೆ ಇತರ ಮೂವರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿವಪ್ರಸಾದ್ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ತನ್ನ ಮೇಲೆ ಪತ್ನಿ ಅಂಜು ಮತ್ತು ಅವಳ ಪ್ರಿಯಕರ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಶಿವಪ್ರಸಾದ್ ಹೇಳಿಕೆ ನೀಡಿದ್ದಾನೆ.
ಹತ್ಯಾ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಬಾಡಿಗೆ ಹಂತಕ ಸಂಜೀವ್ ಎಂಬಾತನನ್ನು ಬಂಧಿಸಿದ್ದು, ಹತ್ಯೆಗೆ 2 ಲಕ್ಷ ರೂಪಾಯಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ರಾಹುಲ್ ಎನ್ನುವ ವ್ಯಕ್ತಿ ಬಾಡಿಗೆ ಹಂತಕ ಸಂಜೀವ್ ಅವರನ್ನು ಅಂಜು ಮತ್ತು ಅವಳ ಪ್ರಿಯಕರ ದೀಪಕ್ನಿಗೆ ಪರಿಚಯಿಸಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.