ಮುಂಬೈ : ಕಾಂಗ್ರೆಸ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ನರೇಂದ್ರ ಮೋದಿ ಮುಖೇಶ ಅಂಬಾನಿಯವರ ಜೇಬಿನಲ್ಲಿದ್ದಾರೆ ಎಂದು ಆಪ್ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಿಲಾಯನ್ಸ್ ಕಂಪೆನಿ ತಳ್ಳಿಹಾಕಿದೆ. ಅರವಿಂದ ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎಂದು ಹೇಳಿದೆ .
ಮುಖೇಶ ಅಂಬಾನಿ ಮತ್ತು ರಿಲಾಯನ್ಸ್ನ ಯಾವುದೆ ಗುಪ್ತ ಅಕೌಂಟ್ ಇಲ್ಲ ಎಂದು ಕಂಪೆನಿ ತಿಳಿಸಿದೆ. ಮತ್ತು ಭಾರತ ಬಿಟ್ಟು ಬೇರಾವುದೇ ದೇಶದಲ್ಲಿ ಯಾವುದೆ ಅಕೌಂಟ ಇಲ್ಲ ಎಂದು ಕಂಪೆನಿ ಸ್ಪಷ್ಟ ಪಡಿಸಿದೆ.
ಇದಕ್ಕಿಂತ ಮೊದಲು ಮುಖೇಶ ಅಂಬಾನಿ ಮತ್ತು ಅನಿಲ ಅಂಬಾನಿಯವರು ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟಿದ್ದಾರೆ ಎಂದು ಅರವಿಂದ ಕೇಜ್ರಿವಾಲ ತಿಳಿಸಿದ್ದರು. ಆದರೆ ಇದನ್ನು ರಿಲಾಯನ್ಸ್ ವಿರೋಧಿಸಿ ಅರವಿಂದ ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎಂದು ತಿಳಿಸಿದೆ.