ಈ ಸಲದ ಚುನಾವಣೆ ಸಾವಿನ ಚುನಾವಣೆ ಆಗಿದೆ

ಗುರುವಾರ, 17 ಏಪ್ರಿಲ್ 2014 (15:17 IST)
PR
ಇಂದು ಬೆಳಿಗ್ಗೆಯಿಂದ ಚುನಾವಣೆ ನಡೆಯುತ್ತಿದೆ , ಈ ವೇಳೆಯಲ್ಲಿ ಇಬ್ಬರು ಚುನಾವಣೆ ಸಿಬ್ಬಂಧಿ ಸಾವನ್ನಪ್ಪಿದ್ದ ಘಟನೆ ವರದಿಯಾಗಿತ್ತು . ಆದರೆ ಇನ್ನೋಂದು ವಿಷಯ ಏನೆಂದರೆ ಒಬ್ಬ ಹಿರಿಯ ಮಹಿಳೆ ಮತದಾನದ ನಂತರ ಹೃದಯಾಘಾತದಿಂದ ಮರಣವನ್ನಪ್ಪಿದ್ದಾರೆ.

ಚಾಮರಾಜ ಜಿಲ್ಲೆಯ ಮೂಕನಳ್ಳಿ ಗ್ರಾಮದಲ್ಲಿ ಒಬ್ಬ ಹಿರಿಯ ಮಹಿಳೇ ಮತದಾನ ಮಾಡಲು ಮತದಾನ ಕೇಂದ್ರಕ್ಕೆ ಬಂದಿದ್ದಳು, ಮತದಾನ ಮಾಡಿದ ನಂತರ ಹೃದಯಾಘಾತದಿಂದ ಈಕೆ ಸಾವನ್ನಪ್ಪಿದ್ದಾಳೆ.

ಯಾದಗಿರಿ ಜಿಲ್ಲೆಯ ಸುರಪೂರ ತಾಲುಕಿನ ದೇವಾಪುರದಲ್ಲಿ ಕೂಡ ಒಬ್ಬ ಹಿರಿಯ ವ್ಯಕ್ತಿ ಮಾನಪ್ಪಾ ಬಾವಿ (50) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ . ಇಲ್ಲಿಯವರೇಗೆ ಚುನಾವಣೆ ಸಮಯದಲ್ಲಿ ಒಟ್ಟು 6 ಜನರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ