ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ರಾಜೀನಾಮೆ?

ಗುರುವಾರ, 30 ಜನವರಿ 2014 (20:09 IST)
PR
PR
ಕಾಂಗ್ರೆಸ್ ಉತ್ತರಾಖಂಡದ ಮುಖ್ಯಮಂತ್ರಿ ಬಹುಗುಣ ಅವರನ್ನು ಪದಚ್ಯುತಗೊಳಿಸಲು ಯೋಜಿಸಿದೆ ಎಂಬ ಊಹಾಪೋಹ ದಟ್ಟವಾಗಿ ಹರಡಿದ್ದ ನಡುವೆ ವಿಜಯ್ ಬಹುಗುಣ ತಮ್ಮ ಸ್ಥಾನಕ್ಕೆ ಸ್ವತಃ ರಾಜೀನಾಮೆ ನೀಡಿದ್ದಾರೆ. ಅವರು ಸೋನಿಯಾಗೆ ರಾಜೀನಾಮೆ ಪತ್ರ ಸಲ್ಲಿಸಲು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಏತನ್ಮಧ್ಯೆ, ಕೇಂದ್ರ ಜಲಸಂಪನ್ಮೂಲ ಸಚಿವ ಹರೀಶ್ ರಾವತ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಆಹಾರ ಸಚಿವ ಪ್ರೀತಮ್ ಸಿಂಗ್ ಮತ್ತು ಲೋಕಸಭೆ ಸದಸ್ಯ ಸತ್ಪಾಲ್ ಮಹಾರಾಜ್ ಅವರ ಹೆಸರೂ ಕೇಳಿಬರುತ್ತಿದೆ.

ಹರೀಶ್ ರಾವತ್ ಹೆಸರು ಆ ಹುದ್ದೆಗೆ ಕೇಳಿಬರುತ್ತಿರುವ ನಡುವೆ 22 ಕಾಂಗ್ರೆಸ್ ಶಾಸಕರು ಸೋನಿಯಾಗೆ ಪತ್ರ ಬರೆದು ಹರೀಶ್ ರಾವತ್ ಹೆಸರಿಗೆ ಅತೃಪ್ತಿ ವ್ಯಕ್ತಪಡಿಸಿರುವುದು ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಬಿರುಕು ಸ್ಪಷ್ಟವಾಗಿ ಗೋಚರಿಸಿದೆ.

ವೆಬ್ದುನಿಯಾವನ್ನು ಓದಿ