ಉತ್ತರಾಖಂಡ ಜಲಪ್ರಳಯ: ಎಲ್ಲಿದ್ದಿರಿ ರಾಹುಲ್ ಗಾಂಧಿಯವರೇ?

ಸೋಮವಾರ, 24 ಜೂನ್ 2013 (13:50 IST)
PR
PR
ಉತ್ತರಾಖಂಡ ಪ್ರವಾಹ ಪೀಡಿತ ಪ್ರದೇಶಕ್ಕೆ ಸೋನಿಯಾ ಗಾಂಧಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭೆಟ್ಟಿ ಕೊಟ್ಟಿದ್ದಾರೆ. ಆದರೆ ರಾಹುಲ್ ಗಾಂಧೀ ಇಲ್ಲಿಯವರೆಗೂ ಭೆಟ್ಟಿ ನೀಡಿಲ್ಲ. ಬಿಜೆಪಿ ಕೂಡ ಇದೆ ಪ್ರಶ್ನೆ ರಾಹುಲ್ ಅವರಿಗೆ ಕೇಳಿದೆ .

ಸಾಮಾಜಿಕ ತಾಣಗಳಲ್ಲಿ ರಾಹುಲ್ ಗಾಂಧಿ ಬಗ್ಗೆ ಚರ್ಚೆ ನಡಿತಾ ಇದೆ. ಯಾಕೆ ಅವರು ಇನ್ನೂ ಉತ್ತರಾಖಂಡಕ್ಕೆ ಭೆಟ್ಟಿ ಕೊಟ್ಟಿಲ್ಲ? ಅಂತ ಪ್ರಶ್ನೆಗಳನ್ನು ಪೋಸ್ಟ್ ಮಾಡ್ತಾ ಇದ್ದಾರೆ, ಆ ಪೋಸ್ಟಗಳ ಮೇಲೆ ಸಾಕಷ್ಟು ಚರ್ಚೆ ನಾಡೆಯುತ್ತಿದೆ.

ಕಾಂಗ್ರೆಸ್ ರಾಹುಲ್ ಅವರು ದೇಶದ ಭಾವಿ ಪ್ರಧಾನಿ ಎಂದೇ ಹೇಳಿಕೊಂಡು ಬರ್ತಾ ಇದೆ, ಆದರೆ ಈ ಭಾವಿ ಪ್ರಧಾನಿ ಇವಾಗ ಎಲ್ಲಿ ? ಸಾವಿರಾರು ಜನ ಜೀವ ಕಳಕೊಂಡು , ಲಕ್ಷಾಂತರ ಜನ ನಿರಾಶ್ರೀತರಾದಾಗ ಈ ಯುವ ನಾಯಕ ಎಲ್ಲಿ? ಅಂತ ಫೆಸ್ಬೂಕ್ ನಲ್ಲಿ ಯುವಕರು ಪ್ರಶ್ನೆ ಮಾಡ್ತಾ ಇದ್ದಾರೆ .

ಅಷ್ಟಕ್ಕೂ ರಾಹುಲ್ ಗಾಂಧಿಯವರಿಗೆ ಉತ್ತರಾಖಂಡದಲ್ಲಿ ಜಲಪ್ರಳಯ ಆಗಿರೋದು ಗೊತ್ತಿದೆಯೋ ಇಲವೋ ಅಂತ ಬಿಜೆಪಿ ನಾಯಕರು ಟೀಕಿಸಿದ್ದಾರೆ.











ವೆಬ್ದುನಿಯಾವನ್ನು ಓದಿ