ಕಾಲ್ಕಡಗ ಬಿಚ್ಚಲಾಗದೇ ಕಾಲುಗಳನ್ನೇ ಕಡಿದ ದರೋಡೆಕೋರರು

ಗುರುವಾರ, 3 ಅಕ್ಟೋಬರ್ 2013 (18:49 IST)
PR
PR
ಜೈಪುರ: ಕೆಲವು ಅಜ್ಞಾತ ದರೋಡೆಕೋರರು ಜೈಪುರದ ಬಳಿಯ ಗ್ರಾಮವೊಂದರಲ್ಲಿ 50 ವರ್ಷ ವಯಸ್ಸಿನ ಮಹಿಳೆಯನ್ನು ಕೊಂದು ಅವಳ ಕಾಲನ್ನು ಕಡಿದುಕೊಂಡು ಹೋಗಿದ್ದಾರೆ. ಮಹಿಳೆಯನ್ನು ಕೊಂದು ಅವಳ ಕಾಲನ್ನು ಕಡಿದುಕೊಂಡು ಹೋಗಿದ್ದೇಕೆಂದು ಆಶ್ಚರ್ಯವಾಗಬಹುದು. ಆದರೆ ಕಾಲಿನಲ್ಲಿದ್ದ ಕಾಲ್ಕಡಗವನ್ನು ಬಿಚ್ಚಲು ಸಾಧ್ಯವಾಗದೇ ಮಹಿಳೆಯನ್ನು ಕೊಂದು ಕಾಲುಗಳನ್ನೇ ಕಡಿಯುವ ಪೈಶಾಚಿಕ ಕೃತ್ಯವೆಸಗಿದ್ದಾರೆ. ಮಹಿಳೆಯ ದೇಹ ಬುಧವಾರ ಸಿಕ್ಕಿದ್ದು ಅವಳ ಕಾಲುಗಳೇ ನಾಪತ್ತೆಯಾಗಿತ್ತು. ದರೋಡೆಕೋರರು ಭೀಕರ ಹತ್ಯೆ ನಡೆಸಿದ ಬಳಿಕ ಕಾಲುಗಳನ್ನು ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರಕ್ಕೆ 35 ಕಿಮೀ ದೂರ ಫಾಗಿ ಗ್ರಾಮದ ಬಳಿಕ ಶಂಕರಪುರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ರುಕ್ಮಿಣಿ ದೇವಿ ಎಂಬ ಮಹಿಳೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ತೆರಳಿದ್ದಾಗ ನಾಪತ್ತೆಯಾಗಿದ್ದಳು. ನಂತರ ದಾರಿಹೋಕರು ಕಾಲುಗಳಿಲ್ಲದ ಅವಳ ದೇಹವನ್ನು ಪತ್ತೆಹಚ್ಚಿದ್ದರು. ಮಹಿಳೆ ಬೆಳ್ಳಿಯ ಕಾಲ್ಕಡಗಗಳನ್ನು ಧರಿಸಿದ್ದಳು ಎಂದು ಕುಟುಂಬದವರು ಹೇಳಿದ್ದಾರೆ. ಬೆಳ್ಳಿಯ ಕಾಲ್ಕಡಗಕ್ಕಾಗಿ ವಯಸ್ಕ ಮಹಿಳೆಯರನ್ನು ಹತ್ಯೆ ಮಾಡುವ ತಂಡಕ್ಕಾಗಿ ಈಗ ಪೊಲೀಸರು ಶೋಧ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ