ಚಿನ್ನಾಭರಣ ವ್ಯಾಪಾರಿಗಳನ್ನು ಬೆಂಬಲಿಸಿದ ಅಣ್ಣಾ ಹಜಾರೆ

ಶುಕ್ರವಾರ, 6 ಏಪ್ರಿಲ್ 2012 (11:45 IST)
PTI
ಕೇಂದ್ರ ಸರಕಾರ ಚಿನ್ನಾಭರಣಗಳ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಿರುವುದು ಜನವಿರೋಧಿ ನೀತಿಯಾಗಿದೆ. ಚಿನ್ನಾಭರಣ ವ್ಯಾಪಾರಿಗಳ ಹೋರಾಟವನ್ನು ಬೆಂಬಲಿಸುವುದಲ್ಲದೇ ವಿತ್ತಸಚಿವ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆಯುವುದಾಗಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಚಿನ್ನದ ಮೇಲಿನ ಅಮುದು ತೆರಿಗೆ ಮತ್ತು ಬ್ರಾಂಡ್‌ರಹಿತ ಚಿನ್ನಾಭರಣಗಳ ಮೇಲಿನ ಅಬಕಾರಿ ತೆರಿಗೆಯನ್ನು ರದ್ದುಗೊಳಿಸುವಂತೆ ವ್ಯಾಪಾರಿಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಚಿನ್ನಾಭರಣ ವ್ಯಾಪಾರಿಗಳು ರಸ್ತೆತಡೆ ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾಗ ಮುಷ್ಕರನಿರತರು ಗಂಭೀರವಾಗಿ ಗಾಯಗೊಂಡಿದ್ದರು.

ಕೇಂದ್ರ ಸರಕಾರ ಬ್ರಾಂಡ್‌ರಹಿತ ಚಿನ್ನಾಭರಣಗಳ ಮೇಲೆ ಶೇ.1 ರಷ್ಟು ಅಬಕಾರಿ ತೆರಿಗೆಯನ್ನು ಹೆಚ್ಚಿಸಿದೆ.ಮುಂಬೈಯೊಂದರಲ್ಲಿಯೇ 2500 ಚಿನ್ನಾಭರಣಗಳ ವ್ಯಾಪಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ