ಜಗನ್‌ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು.

ಶುಕ್ರವಾರ, 30 ಆಗಸ್ಟ್ 2013 (09:07 IST)
PTI
PTI
ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್. ಜಗನ್‌ಮೋಹನ್ ರೆಡ್ಡಿಯವರ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಚಂಚಲಗೂಡ ಜೈಲಿನಿಂದ ಜಗನ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಮೈಕ್ಯಾಂಧ್ರವನ್ನು ಬೆಂಬಲಿಸುತ್ತಿರುವ ಜಗನ್‌, ಆಂಧ್ರ ವಿಭಜನೆಯನ್ನು ವಿರೋಧಿಸಿ ಕಳೆದ ಭಾನುವಾರದಿಂದ ಅಮರಣಾಂತರ ಉಪವಾಸ ಕೈಗೊಂಡಿದ್ದರು.

ವೆಬ್ದುನಿಯಾವನ್ನು ಓದಿ