ತುಳಜಾಪುರದಲ್ಲಿ ಭೀಕರ ಅಪಘಾತಕ್ಕೆ ಆರು ವಿದ್ಯಾರ್ಥಿಗಳು ಬಲಿ

ಶನಿವಾರ, 7 ಡಿಸೆಂಬರ್ 2013 (13:28 IST)
PR
PR
ತುಳಜಾಪುರ: ಮಹಾರಾಷ್ಟ್ರದ ತುಳಜಾಪುರ ಬಳಿ ಇಂದು ಭೀಕರ ಅಪಘಾತ ಸಂಭವಿಸಿದ್ದು ಮಿನಿ ಬಸ್- ವೋಲ್ವೋ ಬಸ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಕೊಲ್ಲಾಪುರ ಮೂಲದವರು. ಪ್ರವಾಸಕ್ಕೆ ಉತ್ಸಾಹದಿಂದ ಹೊರಟಿದ್ದ ವಿದ್ಯಾರ್ಥಿಗಳ ಪಾಲಿಗೆ ಈ ಪ್ರವಾಸವು ಮೃತ್ಯುಸದೃಶವಾಗುತ್ತದೆಂದು ಎಣಿಸಿರಲಿಲ್ಲ. ಆದರೆ ವಿಧಿಲಿಖಿತವೆಂಬಂತೆ 6 ವಿದ್ಯಾರ್ಥಿಗಳು ಸಾವಿನ ದವಡೆಗೆ ಬಲಿಯಾದರು.ಈ ವಿದ್ಯಾರ್ಥಿಗಳು ಕೊಲ್ಲಾಪುರದ ತುಳಜಾಪುರದ ಅಂಬಾಭವಾನಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ 6 ವಿದ್ಯಾರ್ಥಿಗಳು ಸತ್ತಿದ್ದು, 10 ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಗಣೇಶ್ ಕುಂಬಾರ್, ಆಕಾಶ್, ಸೂರಜ್ ಪಾಟೀಲ್, ಪಂಕಜ್ ಕುಂಬಾರ್, ಅಕ್ಷಯ್, ಚಾಲಕ ಪ್ರತಾಪ್ ಮೃತರಾದ ದುರ್ದೈವಿಗಳು. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲುಮಾಡಲಾಗಿದೆ. ಮಿನಿ ಬಸ್‌ನಲ್ಲಿ 17 ಜನರು ಪ್ರಯಾಣ ಮಾಡುತ್ತಿದ್ದರು.

ವೆಬ್ದುನಿಯಾವನ್ನು ಓದಿ