ತೆಲಂಗಾಣದಲ್ಲಿ ಸೋನಿಯಾ ಗಾಂಧಿ ದೇವಾಲಯ ನಿರ್ಮಾಣಕ್ಕೆ ಸಿದ್ದತೆ

ಬುಧವಾರ, 8 ಜನವರಿ 2014 (18:46 IST)
PR
ಪ್ರತ್ಯೇಕ ತೆಲಂಗಾಣಾ ರಾಜ್ಯಕ್ಕಾಗಿ ಪ್ರಯತ್ನಿಸಿದ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಅಭಿನಂಧಿಸಲು ಮೆಹಬೂಬ್‌ನಗರದಲ್ಲಿ ಶಾಶ್ವತ ಮಂದಿರವೊಂದನ್ನು ನಿರ್ಮಿಸಲು ಕಾಂಗ್ರೆಸ್ ಶಾಸಕರೊಬ್ಬರು ಸಿದ್ದತೆ ನಡೆಸಿದ್ದಾರೆ.

ಸೋನಿಯಾ ಗಾಂಧಿಯವರ ಮಂದಿರದ ಶಂಕುಸ್ಥಾಪನೆ ನೇರವೇರಿತು. ಸಿಕಿಂದ್ರಾಬಾದ್ ಕಂಟೋನ್ಮೆಂಟ್ ಮಾಜಿ ಸಚಿವ ಮತ್ತು ಶಾಸಕ ಶಂಕರ್‌ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು

ಸೋನಿಯಾ ಗಾಂಧಿಯವರ 9 ಅಡಿ ಎತ್ತರದ ಕಂಚಿನ ಮೂರ್ತಿ ಸ್ಥಾಪಿಸಲಾಗುತ್ತಿದ್ದು, ಹೈದ್ರಾಬಾದ್ -ಕರ್ನೂಲ್ ಹೆದ್ದಾರಿಯಲ್ಲಿರುವ ಶಂಕರ್ ರಾವ್ ಅವರ ಸ್ವಂತ ಜಮೀನಿನಲ್ಲಿ 9 ಎಕರೆ ಸ್ಥಳದಲ್ಲಿ ಸೋನಿಯಾ ಮಂದಿರ ಕಂಗೊಳಿಸಲಿದೆ

ಸೋನಿಯಾ ಗಾಂಧಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ತುಂಬಾ ಶ್ರಮವಹಿಸಿದ್ದರಿಂದ ಅವರಿಗೆ ಗೌರವಾರ್ಥವಾಗಿ ಮಂದಿರಕ್ಕೆ ಮಹಾಕ್ಷೇತ್ರಂ ಮತ್ತು ಸೋನಿಯಾ ಗಾಂಧಿ ಶಾಂತಿವನಂ ಎಂದು ಹೆಸರಿಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಶಂಕರ ರಾವ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ