ನವದೆಹಲಿ: ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಉದ್ದೇಶಿಸಿ ನವದೆಹಲಿಯಲ್ಲಿ ಮಾತನಾಡಿದರು.ಅವರ ಭಾಷಣದ ಮುಖ್ಯಾಂಶಗಳನ್ನು ಕೆಳಗೆ ನೀಡಲಾಗಿದೆ. * ಪ್ರತಿಯೊಬ್ಬರೂ ಅವರು ಇರುವ ಸ್ಥಳದಲ್ಲೇ ಉದ್ಯೋಗ ಸಿಗಬೇಕು. ಅವರು ಉದ್ಯೋಗಕ್ಕಾಗಿ ತಮ್ಮ ಮನೆಗಳನ್ನು ಏಕೆ ಬಿಡಬೇಕು? * ನಗರೀಕರಣವನ್ನು ಅವಕಾಶವೆಂದು ಭಾವಿಸಬೇಕು. ಇದನ್ನು ತೊಡಕು ಎನ್ನುವಂತೆ ಕಾಣಬಾರದು. * ನಮ್ಮ ಗುರಿ- ಗ್ರಾಮದ ಹೃದಯ ಮತ್ತು ನಗರದ ಸೌಲಭ್ಯಗಳು.
PR
PR
*ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಭವಿಷ್ಯ ವಿಪುಲವಾಗಿದೆ. * ನಾವು ತಂತ್ರಜ್ಞಾನದ ಬಗ್ಗೆ. ಉತ್ಪಾದನೆ ಹೆಚ್ಚಳದ ಬಗ್ಗೆ ಯೋಚಿಸುತ್ತಿಲ್ಲ. * ನ್ಯಾಯ ವಿಳಂಬ ನ್ಯಾಯ ನಿರಾಕರಣೆ ಎಂದು ನಾವು ತಿಳಿಯಬೇಕು. ನಾವು ವೇಗದ ನ್ಯಾಯಕ್ಕೆ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು. *ಗುಜರಾತಿನಲ್ಲಿ ಅನೇಕ ಬಾಕಿ ಪ್ರಕರಣಗಳಿವೆ. ನಾವು ಅದೇ ಮೂಲಸೌಲಭ್ಯ ಬಳಸಿಕೊಂಡು ಸಂಜೆ ಕೋರ್ಟ್ಗಳನ್ನು ಸ್ಥಾಪಿಸಿದ್ದೇವೆ. * ನಾವು ಲೋಕಅದಾಲತ್ಗಳಿಗೆ ಪಾವಿತ್ರ್ಯ ನೀಡಿದ್ದೇವೆ. ಈ ಕೋರ್ಟ್ ಲಕ್ಷಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತದೆ. * ಕೌಶಲ್ಯ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ನಾವು ಒತ್ತು ನೀಡಬೇಕು.
PR
PR
* ಕೌಶಲ್ಯ ಅಭಿವೃದ್ದಿಯ ಬಗ್ಗೆ ನಾವು ಯೋಚಿಸಿದರೆ, ಜನರು ಸ್ವಾವಲಂಬಿಗಳಾಗುತ್ತಾರೆ. * ರಾಜ್ಯ ಸ್ವಾಮ್ಯದ ಘಟಕಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಈ ವಿಷಯದಲ್ಲಿ ರಾಜಕೀಯ ಇರಬಾರದು. * ನಮ್ಮ ರಾಜ್ಯಗಳು ನಮಗೆ ಬಲನೀಡುತ್ತವೆ. ಅವು ನಮ್ಮ ದುರ್ಬಲತೆಯಲ್ಲ. * ಒಕ್ಕೂಟ ವ್ಯವಸ್ಥೆ ಭಾರತಕ್ಕೆ ಅಗತ್ಯವಾಗಿದೆ. ಇದು ಭಾರತಕ್ಕೆ ಶಕ್ತಿ ನೀಡುತ್ತದೆ. * ನಗರಗಳು ಚಲನಶೀಲ ಆರ್ಥಿಕತೆಯ ದಿಕ್ಕಿನಲ್ಲಿ ಅಭಿವೃದ್ಧಿಯಾಗಬೇಕು.
* ಮುಂಬೈಯನ್ನು ದೆಹಲಿಯಿಂದ ಆಳಲಾಗುತ್ತದೆಯೇ? ನನೆಗ ಗಾಂಧಿನಗರದಿಂದ ಸೂರತ್ ನಿರ್ವಹಣೆ ಸಾಧ್ಯವೇ? * ತಂತ್ರಜ್ಞಾನವು ಪಾರದರ್ಶಕತೆ ಸಾಧನೆಗೆ ನೆರವಾಗಬಹುದು. * ಎರಡು ನಿಮಿಷಗಳ ಸಂದರ್ಶನದಲ್ಲಿ ನೀವು ಒಬ್ಬರ ಮೌಲ್ಯಮಾಪನ ಹೇಗೆ ಮಾಡಲಾಗುತ್ತದೆ. ಅವು ಇನ್ನಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡುತ್ತವೆ.