ಪೋಲೀಸರ ಕೈಗೆ ಸಿಗದೇ ಅಸ್ರಾಮ್‌ ಬಾಪು ಎಸ್ಕೇಪ್‌.

ಶನಿವಾರ, 31 ಆಗಸ್ಟ್ 2013 (13:31 IST)
PTI
PTI
ಲೈಂಗಿಕ ದೌರ್ಜನ್ಯದ ಆರೋಪವನ್ನು ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನ ಅಸ್ರಾಮ್‌ ಬಾಪು ನಾಪತ್ತೆಯಾಗಿದ್ದಾರೆ. ಪೋಲೀಸರ ಕೈಗೆ ಸಿಗದೇ ಕಳ್ಳಾಟವಾಡುತ್ತಿರುವ ಬಾಪು ತನ್ನ ಬೆಂಬಲಿಗ ಭಕ್ತರನ್ನು ಮುಂದೆ ಬಿಟ್ಟು ಗದ್ದಲ ಸೃಷ್ಟಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕಾಗಿ ಅಸ್ರಾಮ್ ಬಾಪು ವಿರುದ್ಧ ಜೋಧ್‌ಪುರ ಪೋಲೀಸರು ಸಮನ್ಸ್‌ ಜಾರಿ ಮಾಡಿದ್ದರು. ನೆನ್ನೆ ಕಡೆಯ ದಿನವಾಗಿದ್ದರೂ "ಸಂಬಂಧಿಕರೊಬ್ಬರು ಸವನ್ನಪ್ಪಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಗಲು ಸಾಧ್ಯವಾಗುತ್ತಿಲ್ಲ" ಎಂಬ ಪತ್ರವನ್ನು ಪೋಲೀಸರಿಗೆ ರವಾನಿಸಿ ನಾಪತ್ತೆಯಾಗಿದ್ದ. ಆದರೆ ಇಂದು ಪೋಲೀಸರು ಅಸ್ರಮ್ ಬಾಪುವಿಗಾಗಿ ಎಲ್ಲಾ ಆಶ್ರಮಗಳನ್ನು ತಡಕಾಡುತ್ತಿದ್ದಾರೆ. ಆದರೆ ಅಸ್ರಾಮ್‌ ಬಾಪುವಿನ ಪತ್ತೆಯೇ ಇಲ್ಲ.

ಜೋಧ್‌ಪುರ, ಇಂದೋರ್‌, ಗುಜರಾತ್‌ ಸೇರಿದಂತೆ ಎಲ್ಲಾಕಡೆಗಳಲ್ಲಿಯೂ ಹುಡುಕಲಾಗುತ್ತಿದ್ದು ಅಸ್ರಾಮ್ ಬಾಪುಯವಿನ ಸುಳಿವು ಮಾತ್ರ ಸಿಗುತ್ತಿಲ್ಲ. ವಿಚಾರಣಗೆ ಬರ್ತೀನಿ ಬರ್ತೀನಿ ಅಂತ ಹೇಳಿಕೊಂಡು ತಿರುಗಾಡುತ್ತಿದ್ದ ದೇವಮಾನವ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟಿದ್ದಾನೆ.

ಈ ಸಂಬಂಧ ವರದಿ ಮಾಡಲು ತೆರಳಿದ ಪತ್ರಕರ್ತೆ ಭವಾನಿ ಸಿಂಗ್‌ ಮೇಲೆ ಬಾಪು ಬೆಂಬಲಿಗ ಭಕ್ತರು ಹಲ್ಲೆ ನಡೆಸಿದ್ದಾರೆ. ಅಷ್ಟೆ ಅಲ್ಲ, ಕ್ಯಾಮೆರ ಮ್ಯಾನ್ ತಲೆಯನ್ನು ಒಡೆದುಬಿಟ್ಟಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅದೃಶ್ಯವಾಗಿರುವ ಅಸ್ರಾಮ್ ಬಾಪುವನ್ನು ಪತ್ತೆ ಹಚ್ಚುವಲ್ಲಿ ಪೋಲೀಸರು ನಿರತರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ