ಫೋನ್‌ ಕದ್ದಾಲಿಕೆ ಪ್ರಕರಣ: ನಾಲ್ವರಿಗೆ ಜಾಮೀನು

ಶುಕ್ರವಾರ, 31 ಮೇ 2013 (15:26 IST)
PR
PR
ಬಿಜೆಪಿ ಮುಖಂಡ ಅರುಣ್‌ ಜೇಟ್ಲಿ ಅವರ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಸಂಬಧಿಸಿದಂತೆ ದೆಹಲಿ ನ್ಯಾಯಾಲಯವೊಂದು ನಾಲ್ಕು ಮಂದಿ ಆರೋಪಿಗಳಿಗೆ ಗುರುವಾರ ಜಾಮೀನು ಮಂಜೂರು ಮಾಡಿದೆ.

ದೆಹಲಿ ಪೊಲೀಸ್‌ ಪೇದೆ ಅರವಿಂದ್‌ ದಬಾಸ್‌ ಮತ್ತು ಮೂವರು ಖಾಸಗಿ ಪತ್ತೆದಾರರಾದ ಅನುರಾಗ್‌ ಸಿಂಗ್‌, ನೀರಜ್‌ ನಾಯರ್ ಮತ್ತು ನಿತೀಶ್‌ ಸಿಂಗ್‌ ಅವರಿಗೆ ದೆಹಲಿ ಮಹಾನಗರ ಮುಖ್ಯ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಈಗಾಗಲೇ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದ್ದು, ಅಲ್ಲದೆ ಯಾವುದೇ ವಿಚಾರಣೆ ಅಗತ್ಯವಿಲ್ಲದ ಕಾರಣ ನಾಲ್ಕು ಮಂದಿ ಆರೋಪಿಗಳಿಗೆ ಜಾಮೀನು ನೀಡಲಾಗಿದೆ ಎಂದು ಕೋರ್ಟ್‌ ತಿಳಿಸಿದೆ.

ವೆಬ್ದುನಿಯಾವನ್ನು ಓದಿ