ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೇವಮಾನವ

ಸೋಮವಾರ, 31 ಮಾರ್ಚ್ 2014 (15:18 IST)
ನವದೆಹಲಿ: ದೇವಮಾನವರೆಂದು ಜನರ ಗೌರವಕ್ಕೆ ಪಾತ್ರರಾದ ಧಾರ್ಮಿಕ ನಾಯಕರು ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನುಷ ಘಟನೆ ಸಂಭವಿಸಿದೆ. 15 ವರ್ಷ ವಯಸ್ಸಿನ ಬಾಲಕಿ ನೀಡಿದ ದೂರಿನ ಮೇಲೆ ಧಾರ್ಮಿಕ ನಾಯಕ ಅಸಾರಾಂ ಬಾಪು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಧ್ಯದೆಹಲಿಯ ಕಮಲಾ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಅಸಾರಾಂ ಬಾಪು ವಿರುದ್ಧ ಬಾಲಕಿ ಲಿಖಿತ ದೂರು ನೀಡಿದ್ದಾಳೆ.

ಬಾಲಕಿಯು ಜೋಧಪುರದಲ್ಲಿರುವ ದೇವಮಾನವನ ಟ್ರಸ್ಟ್‌ಗೆ ಸೇರಿದ ವಿದ್ಯಾರ್ಥಿನಿಲಯದಲ್ಲಿ ತಂಗಿದ್ದಳು. ಉತ್ತರಪ್ರದೇಶದ ಶಹಜಹಾನ್‌ಪುರಕ್ಕೆ ಸೇರಿದ ತನ್ನ ಮೇಲೆ ಜೋಧಪುರದ ಆಶ್ರಮದಲ್ಲಿ ಅಸಾರಾಂ ಬಾಬು ಲೈಂಗಿಕ ದೌರ್ಜನ್ಯ ನಡೆಸಿದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಪ್ರಶ್ನಿಸಲು ಬಾಲಕಿಯ ತಂದೆ ದೇವಮಾನವನನ್ನು ಭೇಟಿ ಮಾಡಲು ದೆಹಲಿಯ ಶಿಬಿರಕ್ಕೆ ಕರೆತಂದಾಗ ದೇವಮಾನವ ಅವರನ್ನು ಭೇಟಿ ಮಾಡದೇ ಹೊರಟುಹೋದ. ಅವಳ ತಂದೆ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.ಅಸಾರಾಂ ಬಾಪು ಅಪಾರ ಅನುಯಾಯಿಗಳನ್ನು ಹೊಂದಿದ್ದು, ಗುಜರಾತ್ ಪೊಲೀಸರು ಅವರು ಮತ್ತಿಬ್ಬರ ವಿರುದ್ಧ ಹತ್ಯೆ ಪ್ರಯತ್ನ ಪ್ರಕರಣ ದಾಖಲಿಸಿದಾಗ ಮುಂಚೆ ಸುದ್ದಿಯಲ್ಲಿದ್ದರು.

ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಅಕ್ರಮ ಭೂಕಬಳಿಕೆ ಕುರಿತು ಅವರು ಆರೋಪಕ್ಕೆ ಗುರಿಯಾಗಿದ್ದರು. 2012ರ ಡಿಸೆಂಬರ್ 16ರಂದು ದೆಹಲಿ ಬಸ್‌ನಲ್ಲಿ 23 ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಅಸಾರಾಂ ಬಾಪು, ಬಲಿಪಶು ವಿದ್ಯಾರ್ಥಿನಿ ಅತ್ಯಾಚಾರಿಗಳನ್ನು ಸೋದರರೆಂದು ಕರೆದು, ಬಿಡುವಂತೆ ಬೇಡಿಕೊಳ್ಳಬೇಕಿತ್ತು ಎಂದು ಹೇಳುವ ಮೂಲಕ ಗಮನಸೆಳೆದಿದ್ದರು.

ವೆಬ್ದುನಿಯಾವನ್ನು ಓದಿ