ಬೆಂಬಲ ವಾಪಸ್ ತಗೊಂಡ್ರೂ 6 ತಿಂಗಳವರೆಗೆ ಆಮ್ ಆದ್ಮಿ ಸರ್ಕಾರ ಸೇಫ್

ಸೋಮವಾರ, 3 ಫೆಬ್ರವರಿ 2014 (17:14 IST)
PR
PR
ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ತಮಗೆ ನಾಲ್ವರು ಎಎಪಿ ಶಾಸಕರ ಬೆಂಬಲವಿದ್ದು, ಕೇಜ್ರಿವಾಲ್ ಸರ್ಕಾರವನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.ಎಎಪಿ ಸರ್ಕಾರದ ಸಂಸ್ಥಾಪಕ ಸದಸ್ಯೆ ಮಧು ಬಾದುರಿ ಕೂಡ ಪಕ್ಷದಿಂದ ಹೊರಗೆ ಹೋಗಿದ್ದು, ಮಹಿಳೆಯರನ್ನು ಆಮ್ ಆದ್ಮಿ ಮಾನವಜೀವಿಯಂತೆ ಪರಿಗಣಿಸುತ್ತಿಲ್ಲ ಎಂದು ಹೇಳಿದ್ದರು. ಸಂಗಮ್ ವಿಹಾರದಲ್ಲಿ ನೀರಿನ ಕೊರತೆಯಿಂದ ಆಕ್ರೋಶಗೊಂಡ ಮಹಿಳೆಯರು ಎಎಪಿಯ ಶಾಸಕ ದಿನೇಶ್ ಮೊಹಾನಿಯಾ ಅವರನ್ನು ತಳ್ಳಿ,ನೂಕಿದ್ದು ಕೂಡ ಎಎಪಿ ವರ್ಚಸ್ಸಿಗೆ ಹಾನಿಯಾಗಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೇಜ್ರಿವಾಲ್ ಸರ್ಕಾರ 6 ತಿಂಗಳವರೆಗೆ ನಿರಾತಂಕವಾಗಿ ಮುಂದುವರಿಯಬಹುದು. ಬಿನ್ನಿ ಸರ್ಕಾರ ಉರುಳಿಸುವ ಬೆದರಿಕೆ ಹಾಕಿದ್ದರೂ ಸರ್ಕಾರಕ್ಕೆ 6 ತಿಂಗಳವರೆಗೆ ಧಕ್ಕೆಯಿಲ್ಲ.

ಏಕೆಂದರೆ ಎಎಪಿ ಸರ್ಕಾರ ರಚನೆಯಾಗಿ 6 ತಿಂಗಳವರೆಗೆ ಬಂಡಾಯ ಶಾಸಕರು ವಿಶ್ವಾಸ ಮತ ಪರೀಕ್ಷೆಗೆ ಕೋರಿಕೆ ಸಲ್ಲಿಸುವುದಕ್ಕೆ ನಿಯಮಗಳು ಅಡ್ಡಿಬರುತ್ತವೆ.ಇದರಿಂದ ಎಎಪಿ ಸರ್ಕಾರ ಅಲ್ಪಮತದಿಂದ ಕೂಡಿದ್ದರೂ 6 ತಿಂಗಳವರೆಗೆ ಸುರಕ್ಷಿತವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ