ಮಾಧ್ಯಮಗಳು ಮೋದಿ, ಲಾಲುಗೆ ಆದ್ಯತೆ ನೀಡಿ ನನ್ನನ್ನು ಕಡೆಗೆಣಿಸುತ್ತಿವೆ: ನಿತೀಶ್ ಕುಮಾರ್

ಶುಕ್ರವಾರ, 14 ಫೆಬ್ರವರಿ 2014 (15:16 IST)
PTI
ಜೆಡಿಯು ಆಯೋಜಿಸುತ್ತಿರುವ ಸಂಕಲ್ಪ ಯಾತ್ರೆ ಸಾರ್ವಜನಿಕ ಸಭೆಗಳನ್ನು ಮಾಧ್ಯಮಗಳು ಕಡೆಗೆಣಿಸುತ್ತಿವೆ. ಕೇವಲ ನರೇಂದ್ರ ಮೋದಿ ಮತ್ತು ಲಾಲು ಪ್ರಸಾದ್ ಯಾದವ್ ಸುದ್ದಿಗಳಿಗೆ ಆದ್ಯತೆ ನೀಡುತ್ತಿವೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಪಿಸಿದ್ದಾರೆ.

ಬಿಹಾರ್ ರಾಜ್ಯದಲ್ಲಿರುವ ಮಾಧ್ಯಮಗಳು ಪಕ್ಷಪಾಕವಾಗಿ ವರ್ತಿಸುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕಿಡಿಕಾರಿದರು.

ನಾನು ಸುಂದರವಾಗಿ ಕಾಣುವದಿಲ್ಲವಾದ್ದರಿಂದ ನನ್ನ ಕಾರ್ಯಕ್ರಮಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿಲ್ಲ. ಆದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸುದ್ದಿಗಳನ್ನು ಅಗತ್ಯಕ್ಕಿಂತ ಹೆಚ್ಚು ಬಿತ್ತರಿಸುತ್ತಿವೆ. ನಾವು ಹಿಂದುಳಿದ ರಾಜ್ಯದಿಂದ ಬಂದವರಾಗಿದ್ದರಿಂದ ಮಾಧ್ಯಮಗಳು ತಾರತಮ್ಯ ತೋರುತ್ತಿವೆಯೇ ಎಂದು ಪ್ರಶ್ನಿಸಿದರು.

ಕಳೆದ ವಾರ ನರೇಂದ್ರ ಮೋದಿ ಮತ್ತು ಲಾಲು ಪ್ರಸಾದ್ ಯಾದವ್ ಡಾರ್ಲಿಂಗ್ಸ್ ಆಫ್ ಮೀಡಿಯಾ ಎಂದು ಕರೆದಿದ್ದರು. ಮೋದಿ ಮತ್ತು ಲಾಲುಗೆ ಅನಗತ್ಯ ವಿವಾದಗಳನ್ನು ಸೃಷ್ಟಿಸುವ ಕಲೆ ಗೊತ್ತಿದೆ. ಅವರ ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಮೊದಲೇ ಮಾಧ್ಯಮಗಳು ಸುದ್ದಿಯನ್ನು ಕಲೆಹಾಕುತ್ತಿವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ