'ಮುಂಬೈ ಪ್ರತ್ಯೇಕ ರಾಜ್ಯ ವಿಚ್ಛೇದನ ಪಡೆದಷ್ಟು ಸುಲಭವಲ್ಲ'

ಬುಧವಾರ, 31 ಜುಲೈ 2013 (19:48 IST)
PR
PR
ಮುಂಬೈ: ಮುಂಬೈ ಪ್ರತ್ಯೇಕ ರಾಜ್ಯವಾಗಿದ್ದರೆ ಚೆನ್ನಾಗಿತ್ತು ಎಂದು ಲೇಖಕಿ ಶೋಭಾ ಡೇ ಟ್ವೀಟ್ ಮಾಡಿರುವುದನ್ನು ಎಂಎನ್‌ಎಸ್ ಮುಖಂಡ ರಾಜ್ ಠಾಕ್ರೆ ,ವಿಚ್ಛೇದನ ಪಡೆದಷ್ಟು ಅದು ಸುಲಭವಲ್ಲ ಎಂದು ವ್ಯಂಗ್ಯವಾಡಿದ್ದಾರೆ. ತೆಲಂಗಾಣದ ರಚನೆ ಹಿನ್ನೆಲೆಯಲ್ಲಿ ಮುಂಬೈ ಮೂಲದ ಲೇಖಕಿ ಮಹಾರಾಷ್ಟ್ರ ಮತ್ತು ಮುಂಬೈ ಯಾಕಾಗಬಾರದು ಎಂದು ಟ್ವೀಟ್‌ ಮಾಡಿದ್ದರು.

ಶೋಭಾ ಡೇ ಲೇಖನಕ್ಕೆ ವಿವಿಧ ರಾಜಕೀಯ ಪಕ್ಷಗಳು ಟೀಕಿಸಿವೆ. ಬಿಜೆಪಿ ಶೋಭಾ ಡೇಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದು, ಮಹಾರಾಷ್ಟ್ರದಲ್ಲಿ ಮುಂಬೈ ಸೇರುವುದಕ್ಕೆ 105 ಜನರು ಪ್ರಾಣತ್ಯಾಗ ಮಾಡಿದರೆನ್ನುವುದು ನೆನಪಿರಲಿ ಎಂದಿದೆ. ಶೋಭಾ ಡೇ ತಮ್ಮ ಬರೆಹವನ್ನು ವಾಪಸ್ ಪಡೆಯುತ್ತಾರೆಂದು ಭಾವಿಸುವೆ ಎಂದು ಬಿಜೆಪಿ ಮುಖಂಡ ವಿನೋದ್ ತಾವ್ಡೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ