ಮೊದಲು ನಿಮ್ಮೊಳಗಿನ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ: ಆಡ್ವಾಣಿಗೆ ಕಾಂಗ್ರೆಸ್

ಬುಧವಾರ, 26 ಅಕ್ಟೋಬರ್ 2011 (10:54 IST)
ಭ್ರಷ್ಟಾಚಾರ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಎಲ್. ಕೆ. ಆಡ್ವಾಣಿ ದೇಶದಾದ್ಯಂತ ಹಮ್ಮಿಕೊಂಡಿರುವ 'ಜನಚೇತನ ಯಾತ್ರೆ'ಯನ್ನು ತರಾಟೆಗೆ ತೆಗೆದುಕೊಂಡಿರುವ ಆಡಾಳಿತರೂಢ ಕಾಂಗ್ರೆಸ್, ಮೊದಲು ನಿಮ್ಮ ಪಕ್ಷದೊಳಗಿನ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಎಂದು ಸಲಹೆ ಮಾಡಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಿಜೆಪಿ ನಾಯಕರನ್ನು ಹೆಸರಿಸದ ಹೊರತು ಭ್ರಷ್ಟಾಚಾರ ಎಂಬ ಶಬ್ದವೇ ಅಪೂರ್ಣವಾಗಿದೆ. ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿಎಸ್. ಎಸ್. ಯಡಿಯೂರಪ್ಪ, ರೆಡ್ಡಿ ಬ್ರದರ್ಸ್, ದಿಲೀಪ್ ಸಿಂಗ್ ಜುದೇವ್ ಹಾಗೂ ಬಂಗಾರು ಲಕ್ಷ್ಮಣ್ ಸೇರಿದಂತೆ ಹಲವು ಬೆಜೆಪಿ ನಾಯಕರು ಭಾರಿ ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಾಷೀದ್ ಅಲ್ವಿ ವರದಿಗಾರರಿಗೆ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ವೋಟಿಗಾಗಿ ನೋಟು ಪ್ರಕರಣದ ಆರೋಪ ಸಂಬಂಧ ಜೈಲುವಾಸ ಅನುಭವಿಸುತ್ತಿರುವ ತಮ್ಮ ಪಕ್ಷದ ಇಬ್ಬರು ಮಾಜಿ ಸಂಸದರನ್ನು ಬಿಜೆಪಿ ನಾಯಕಿ ಸುಷ್ಮಾ ಸ್ಮರಾಜ್ ಭೇಟಿಯಾಗಿರುವ ಪ್ರಕ್ರಿಯೆಯನ್ನು ಸಹ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಅಲ್ಲದೆ ವೋಟಿಗಾಗಿ ನೋಟು ಪ್ರಕರಣದಲ್ಲಿ ತಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಅವರು ವಿವರಿಸಿದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ