ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಸೂಪರ್ ಸ್ಟಾರ್ ಶಾರುಖ್ ಖಾನ್ ನಗರದ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ. ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿಯವರ ಆಕ್ಷನ್ ಚಿತ್ರ ಚೆನ್ನೈ ಎಕ್ಸ್ಪ್ರೆಸ್ ಚಿತ್ರೀಕರಣ ಸಂದರ್ಭದಲ್ಲಿ ಕೆಲವು ಸ್ಟಂಟ್ ದೃಶ್ಯಗಳನ್ನು ಮಾಡುತ್ತಿದ್ದಾಗ 47ರ ಹರೆಯದ ಖಾನ್ ಅವರ ಬಲ ಭುಜಕ್ಕೆ ಗಾಯವಾಗಿತ್ತು.
ಲೀಲಾವತಿ ಆಸ್ಪತ್ರೆಯಲ್ಲಿ ಅವರ ಭುಜದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದೀಗ ಆರಾಮವಾಗಿದ್ದು ವಿಶ್ರಾಂತಿ ಪಡೆದುಕೊಳ್ಳಲು ಸಲಹೆ ನೀಡಲಾಗಿದೆ ಎಂದು ಅವರ ನಿಕಟವರ್ತಿ ಮೂಲಗಳಿಂದ ತಿಳಿದು ಬಂದಿದೆ.
ಗಾಯಗೊಂಡಿದ್ದ ಹೊರತೂ ಶಾರುಖ್ ಅವರು ಬಾಡಿ ಡಬಲ್ಗಳನ್ನು ಬಳಸಲು ನಿರಾಕರಿಸಿ ಖುದ್ದಾಗಿ ಚಿತ್ರದ ಸ್ಟಂಟ್ ದೃಶ್ಯಗಳನ್ನು ಮಾಡುತ್ತಿದ್ದರು. ಲಂಡನ್ನಲ್ಲಿ ವ್ಯಾಸಂಗ ನಿರತ ಅವರ ಮಗ ಆರ್ಯಾನ್ ತಂದೆಯನ್ನು ನೋಡಲು ಮುಂಬೈಗೆ ಆಗಮಿಸಿದ್ದಾನೆ.