ಸಂಜಯ್ ದತ್‌ಗೆ ಜೈಲಿನಲ್ಲಿ ರಮ್, ಬಿಯರ್ ಸಪ್ಲೈ: ವಿನೋದ್ ಬಾಂಬ್

ಶನಿವಾರ, 14 ಡಿಸೆಂಬರ್ 2013 (11:29 IST)
PR
PR
ನಾಗ್ಪುರ: ಬಾಲಿವುಡ್ ಚಿತ್ರನಟ ಸಂಜಯ್ ದತ್ ಅವರಿಗೆ ಪುಣೆಯ ಯರವಾಡ ಜೈಲಿನಲ್ಲಿ ರಮ್, ಬಿಯರ್ ಸಪ್ಲೈ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಕೌನ್ಸಿಲ್ ಪ್ರತಿಪಕ್ಷದ ನಾಯಕ ವಿನೋದ್ ತಾವ್ಡೆ ಶುಕ್ರವಾರ ಬಾಂಬ್ ಸಿಡಿಸಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳು ಮುಂಬೈ ಬಾಂಬ್ ಸ್ಫೋಟಗಳಲ್ಲಿ ಪಾತ್ರವಹಿಸಿ ಶಿಕ್ಷೆಗೊಳಗಾದ ನಟನಿಗೆ ರಮ್ಮ, ಬಿಯರ್ ಪೂರೈಸುವ ಮೂಲಕ ನೆರವಾಗುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಹಿರಿಯ ಬಿಜೆಪಿ ನಾಯಕ, ರೇಪ್ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸ್ ಠಾಣೆಗಳ ಮೂಲಕ ಮಹಾರಾಷ್ಟ್ರದಲ್ಲಿ ಮಹಿಳೆಯರ ರಕ್ಷಣೆ ಕುರಿತು ತಪಾಸಣೆ ನಡೆಸುವಂತೆ ಗೃಹ ಸಚಿವ ಆರ್.ಆರ್. ಪಾಟೀಲ್, ರಾಜ್ಯಸಚಿವ ಸತೇಜ್ ಪಾಟೀಲ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ವರ್ಷ ಗಾಯಕ್‌ವಾಡ್ ಅವರಿಗೆ ಕರೆ ನೀಡಿದರು.

ವೆಬ್ದುನಿಯಾವನ್ನು ಓದಿ