ಸೂರ್ಯನೆಲ್ಲಿ ಗ್ಯಾಂಗ್ ರೇಪ್: ಕುರಿಯನ್‌ಗೆ ನೋಟಿಸ್ ಜಾರಿ

PTI
ಸೂರ್ಯನೆಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಸಭಾ ಉಪ ಸಭಾಪತಿ ಪಿ.ಜೆ. ಕುರಿಯನ್ ಅವರಿಗೆ ಹಿನ್ನಡೆಯಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿ ಸಲ್ಲಿಸಿದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಥೋಡುಪುಝಾ ಸೆಷನ್ಸ್ ನ್ಯಾಯಾಲಯವು ಯುವತಿಯ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಧರ್ಮರಾಜನ್, ಜಮಾಲ್, ಉನ್ನಿಕೃಷ್ಣನ್ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಈ ಸಂಬಂಧ ಮುಂದಿನ ವಿಚಾರಣೆಯನ್ನು ಮೇ 29ಕ್ಕೆ ನಿಗದಿಪಡಿಸಿದೆ.

ತಿರುವಂನಂತಪುರ ಜೈಲಿನಲ್ಲಿರುವ ಧರ್ಮರಾಜನ್ ಪೂಜಾಪುರನನ್ನು ಆ ದಿನ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.

ಪ್ರಕರಣದಲ್ಲಿ ಕುರಿಯನ್ ಅವರ ಪಾತ್ರದ ಕುರಿತು ಮತ್ತಷ್ಟು ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಈ ಹಿಂದಿನ ಅರ್ಜಿ ತಿರಸ್ಕೃತಗೊಂಡಿತ್ತು. ಅದನ್ನು ಪ್ರಶ್ನಿಸಿ ಯುವತಿಯು ಈ ಅರ್ಜಿ ಸಲ್ಲಿಸಿದ್ದಾಳೆ. ನ್ಯಾಯಾಲಯವು ಅರ್ಜಿ ವಿಚಾರಣೆಗೆ ಸ್ವೀಕರಿಸಿದ್ದರಿಂದ ಕುರಿಯನ್ ಅವರಿಗೆ ಹಿನ್ನಡೆಯಾದಂತಾಗಿದೆ.

ವೆಬ್ದುನಿಯಾವನ್ನು ಓದಿ