ಸೋನಿಯಾಗೆ ರಾಜೀನಾಮೆ ಪತ್ರ ಕಳಿಸಿದ ಚಿರಂಜೀವಿ

ಶನಿವಾರ, 7 ಡಿಸೆಂಬರ್ 2013 (09:58 IST)
PR
PR
ನವದೆಹಲಿ: ಕೇಂದ್ರ ಸರ್ಕಾರದ ತೆಲಂಗಾಣ ರಚನೆ ಯೋಜನೆಗೆ ಪ್ರತಿಭಟಿಸಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಕೆ. ಚಿರಂಜೀವಿ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಕಳಿಸಿದ್ದಾರೆ.ಆದರೆ ಪ್ರಧಾನಮಂತ್ರಿಗೆ ರಾಜೀನಾಮೆ ಪತ್ರ ಕಳಿಸಬೇಕಿದ್ದ ನಟ, ರಾಜಕಾರಣಿ ಚಿರಂಜೀವಿ ಎಂದಿನ ಶಿಷ್ಟಾಚಾರ ಮುರಿದು ಪಕ್ಷದ ಅಧ್ಯಕ್ಷೆಗೆ ರಾಜೀನಾಮೆ ಪತ್ರ ಕಳಿಸಿದ್ದಾರೆ. ಸೋನಿಯಾಗೆ ಬರೆದಿರುವ ಪತ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಮ್ಮ ರಾಜೀನಾಮೆ ಪತ್ರಕ್ಕೆ ಒಪ್ಪಿಗೆ ನೀಡುವಂತೆ ಕೇಳಬೇಕೆಂದು ತಿಳಿಸಿದ್ದಾರೆ.

ಈ ವರ್ಷಾರಂಭದಲ್ಲಿ ಕಾಂಗ್ರೆಸ್ ಜತೆ ಪ್ರಜಾ ರಾಜ್ಯಂ ಪಕ್ಷವನ್ನು ವಿಲೀನ ಮಾಡಿದ್ದ ಅವರು, ರಾಜ್ಯಸಭೆಗೆ ಕೂಡ ಔಪಚಾರಿಕ ರಾಜೀನಾಮೆ ಪ್ರಕಟಿಸಲಿದ್ದಾರೆ. ತೆಲಂಗಾಣ ರಚನೆಗೆ ಕ್ಯಾಬಿನೆಟ್ ಅನುಮೋದನೆ ವಿರುದ್ಧ ಪ್ರತಿಭಟಿಸಿ ವೈಎಸ್‌ಆರ್ ಕಾಂಗ್ರೆಸ್ ಮತ್ತು ಟಿಡಿಪಿ 2 ದಿನಗಳ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಚಿರಂಜೀವಿ ರಾಜೀನಾಮೆ ಹೊರಬಿದ್ದಿದೆ.

ವೆಬ್ದುನಿಯಾವನ್ನು ಓದಿ