ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟ ವಿಫಲ: ಜ್ಯೋತಿಷಿ

ಮಂಗಳವಾರ, 26 ಜೂನ್ 2012 (13:49 IST)
PTI
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ ಆರಂಭದಲ್ಲಿ ಯಶಸ್ವಿಯಾದಂತೆ ಎರಡನೇ ಬಾರಿಗೆ ಯಶಸ್ವಿಯಾಗುವುದಿಲ್ಲ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಎರಡನೇ ಬಾರಿಯ ಹಜಾರೆಯವರ ಭ್ರಷ್ಟಾಚಾರ ವಿರೋಧ ಹೋರಾಟ ನಿರೀಕ್ಷಿತ ಯಶಸ್ವಿಯಾಗುವುದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಅಸ್ಟ್ರೋಲಾಜಿಕಲ್ ಸೈನ್ಸ್ ಉಪಾಧ್ಯಕ್ಷ ಕೆ.ರಂಗಾಚಾರಿ ತಿಳಿಸಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ತಾರೆಗಳ ಚಲನವಲನ ಅಧ್ಯಯನದ ಆಧಾರದ ಮೇಲೆ ಭವಿಷ್ಯ ನುಡಿಯುತ್ತಿರುವುದಾಗಿ ಹೇಳಿದ ಅವರು, ಅಣ್ಣಾ ಹಜಾರೆಯವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಜನಬೆಂಬಲ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ನನಗೆ ಸುಮಾರು 30 ವರ್ಷಗಳ ಅನುಭವವಿದೆ. ಜ್ಯೋತಿಷ್ಯ ಶಾಸ್ತ್ರದ ತಾರೆಗಳ ಚಲನವಲನ ಮತ್ತು ಭವಿಷ್ಯ ನೋಡದೆ ಯಾವ ಹೇಳಿಕೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಬ್ಬ ಜ್ಯೋತಿಷಿ ಕ್ರಿಷ್ಣ್ ಬರ್ನವಾಲ್ ಮಾತನಾಡಿ, ಭಾರತದ ಭವಿಷ್ಯದ ಅಡಿಯಲ್ಲಿಯೇ ಭ್ರಷ್ಟಾಚಾರ ಅಡಗಿರುವುದರಿಂದ ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ