‘ನಾನು ಹೇಳಿದೆ ಅಂತ ಕಪ್ಪು ಹಣ ನನ್ನ ಕಾಲ ಬಳಿ ಬಂದು ಬೀಳುತ್ತಾ?’

ಶನಿವಾರ, 3 ಡಿಸೆಂಬರ್ 2016 (22:04 IST)
ನವದೆಹಲಿ: ಕಪ್ಪು ಹಣ ವಿರುದ್ಧ ಹೋರಾಟ ಮಾಡ್ತಿದ್ದೇನೆ ಎಂದು ಘೋಷಣೆ ಮಾಡಿದ ತಕ್ಷಣ ಎಲ್ಲೆಲ್ಲಿ ಕಪ್ಪು ಹಣವಿದೆ ಅದೆಲ್ಲಾ ನನ್ನ ಕಾಲ ಬುಡಕ್ಕೆ ಬಂದು ಬೀಳುತ್ತಾ? ಹೀಗೆಂದು ತಮ್ಮನ್ನು ಟೀಕೆ ಮಾಡುತ್ತಿರುವವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ.

ನೋಟು ನಿಷೇಧವಾಗಿರುವುದರಿಂದ ಸಾವಿರಾರು ಮಂದಿ ಬಡವರು ಕಷ್ಟಪಡುತ್ತಿದ್ದಾರೆ ಎಂಬ ವಿಪಕ್ಷಗಳ ಟೀಕೆಗೆ ಅವರು ಈ ರೀತಿ ಟಾಂಗ್ ಕೊಟ್ಟಿದ್ದಾರೆ. ಇಂದು ಜನರು ಬ್ಯಾಂಕ್ ಗಳ ಮುಂದೆ ನಿಂತು ತಮ್ಮ ಹಣ ಪಡೆಯಲು ಕಷ್ಟಪಡುತ್ತಿರಬಹುದು. ಆದರೆ ಮುಂದೊಂದು ದಿನ ಅವರಿಗೆ ಅದರ ಪ್ರಯೋಜನ ಸಿಗಲಿದೆ.

ಆದಷ್ಟು ಕ್ಯಾಶ್ ಲೆಸ್ ಸಮಾಜದ ಕಡೆಗೆ ನಮ್ಮ ಯೋಜನೆಗಳು ಮುಂದುವರಿಯಬೇಕು. ಕಪ್ಪು ಹಣದ ಬಗ್ಗೆ ಸುಮ್ಮನೇ ಹೇಳುತ್ತಾ ಕೂತರೆ ಅಕ್ರಮ ತಡೆಯಲು ಸಾಧ್ಯವೇ? ಕಠಿಣ ಕ್ರಮ ಕೈಗೊಳ್ಳಬೇಡವೇ? ಅದನ್ನು ನಾನಿಂದು ಮಾಡುತ್ತಿದ್ದೇನೆ ಎಂದು ವಿಪಕ್ಷಗಳನ್ನು ಟೀಕೆ ಮಾಡಿದ್ದಾರೆ. ಇದೇ ವೇಳೆ ಜನಧನ ಖಾತೆಯಿಂದ ಹಣ ಹಿಂಪಡೆಯದಂತೆ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ