’ಖಾರ’ದ ಲಾಟಿಯನ್ನು ಗುಪ್ತಾಂಗಕ್ಕೆ ತುರುಕಿದ ಪೋಲೀಸರಿಂದ ವ್ಯಕ್ತಿ ಕೊಲೆ.

ಶುಕ್ರವಾರ, 25 ಅಕ್ಟೋಬರ್ 2013 (14:48 IST)
PR
PR
ತಮ್ಮ ಕೈಗೆ ಸಿಕ್ಕ ವ್ಯಕ್ತಿಯೊಬ್ಬನನ್ನು ಪೋಲೀಸರು ತೀವ್ರವಾಗಿ ಹಲ್ಲೆ ನಡೆಸಿ ಅವನ ಗುಪ್ತಾಂಗಕ್ಕೆ ಖಾರ ಹಚ್ಚಲಾಗಿರುವ ಲಾಟಿಯನ್ನು ಇಟ್ಟು ಗೂಟ ಜಡಿದಿದ್ದಾರೆ. ಅಷ್ಟು ಸಾಲದು ಎಂದು ಗುಪ್ತಾಂಗದ ಒಳಗೆ ಪೆಟ್ರೋಲ್‌ ಹಾಕಿದ್ದಾರೆ. ಪೋಲೀಸರ ಚಿತ್ರಹಿಂಸೆಯನ್ನು ತಡೆಯಲಾಗದ ವ್ಯಕ್ತಿ ಸಾವಿಗೀಡಾಗಿದ್ದಾನೆ.

ಪೋಲೀಸರ ಇಂತಹ ವಿಕೃತ ಚಿತ್ರಹಿಂಸೆಯಿಂದ ಸತ್ತ ವ್ಯಕ್ತಿಯನ್ನು ಮುನ್ನಾ ಸಿಂಗ್‌ ಎಂದು ಹೇಳಲಾಗುತ್ತಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುನ್ನಾ ಸಿಂಗ್‌ನನ್ನು ಪೋಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು. ವಿಚಾರಣೆಯ ವೇಳೆಯಲ್ಲಿ ಪೋಲೀಸ್‌ ಅಧಿಕಾರಿಗಳು ಅವನ ಗುಪ್ತಾಂಗಕ್ಕೆ ಖಾರ ಹಚ್ಚಲಾಗಿರುವ ಲಾಟಿಯನ್ನು ತುರುಕಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಮುನ್ನಾ ತಕ್ಷಣವೇ ಅಸ್ವಸ್ಥನಾಗಿಬಿಟ್ಟಿದ್ದಾನೆ.

ಅಸ್ವಸ್ಥಗೊಂಡ ಮುನ್ನಾ ಸಿಂಗ್‌ನನ್ನು ಪೋಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮುನ್ನಾ ಸಾವಿಗೀಡಾಗಿದ್ದಾನೆ ಎಂದು ಪೋಲೀಸ್‌ ಮೂಲಗಳು ಹೇಳುತ್ತಿವೆ. ಆದ್ರೆ ಕೆಲವೊಂದು ಮೂಲಗಳ ಪ್ರಕಾರ, ಪೋಲೀಸರು ಅವನ ಗುಪ್ತಾಂಗಕ್ಕೆ ಖಾರದ ಲಾಟಿಯನ್ನು ತುರುಕಿದ ವೇಳೆಯಲ್ಲಿಯೇ ಮುನ್ನಾ ಸಿಂಗ್ ಸಾವಿಗೀಡಗಿದ್ದಾನೆ ಎಂದು ಹೇಳಲಾಗುತ್ತಿದೆ. ಆದ್ರೆ ಪೋಲೀಸರು ನೆಪ ಮಾತ್ರಕ್ಕೆ ಮುನ್ನಾಸಿಂಗ್‌ನನ್ನು ಆಸ್ಪತ್ರೆಗೆ ರವಾನಿಸಿ, ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ವರದಿ ಸಲ್ಲಿಸಿವೆ.

ಮುನ್ನಾ ಮಾಡಿದ ತಪ್ಪಾದ್ರೂ ಏನು ಗೊತ್ತಾ?

PTI
PTI
ಮುನ್ನಾ ಮಾಡಿದ ತಪ್ಪಾದ್ರೂ ಏನು ಗೊತ್ತಾ?

ಮುನ್ನಾ ಸಿಂಗ್‌ ಎಂಬ ವ್ಯಕ್ತಿಯು ಮೇ 5, 2013 ರಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಬೈಕುಂತ್‌ ಬರ್ನವಾಲ್‌ ಎಂಬ ವ್ಯಕ್ತಿಯನ್ನು ಅಪಹರಿಸಿ 30 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಬೈಕುಂತ್‌ ಬರ್ನವಾಲ್‌ ಎಂಬಾತನ ಕುಟುಂಬದವರು ಪೋಲೀಸರಿಗೆ ದೂರು ನೀಡಿದ್ದರು.


ಪ್ರಕರಣದ ಬೆನ್ನು ಹತ್ತಿದ ಪೋಲೀಸರು ಮುನ್ನಾ ಸಿಂಗ್‌ನನ್ನು ಬಂಧಿಸಿ ಜೈಲಿಗೆ ಎಳೆದು ತಂದಿದ್ದರು. ಈ ಬಗ್ಗೆ ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸಲು ಪೋಲೀಸರು ಮುಂದಾಗಿದ್ದಾರೆ. ಆದ್ರೆ ಪೋಲೀಸರ ಖರಾಬ್‌ ಭಾಷೆಯನ್ನು ತಡೆಯಲಾರದೇ ಮುನ್ನಾಸಿಂಗ್ ಸತ್ತೇ ಹೋಗಿದ್ದಾನೆ.

ವೆಬ್ದುನಿಯಾವನ್ನು ಓದಿ