ಹಾಲು ಕುಡಿದು ಹಣ ಪಾವತಿಸದ ಮಹಿಳೆಯನ್ನೇ ಕೊಂದ 20 ವರ್ಷದ ವ್ಯಾಪಾರಿ

ಶನಿವಾರ, 23 ಆಗಸ್ಟ್ 2014 (17:41 IST)
ಹಾಲು ಕುಡಿದು ಹಣ ಪಾವತಿಸದೇ ಇರುವುದನ್ನು ಹಲವಾರು ಬಾರಿ ಪುನರಾವರ್ತಿಸಿದ ಮಹಿಳೆಯನ್ನು ಕೊಲೆಗೈಯ್ದ  20 ವರ್ಷದ ಯುವಕನಿಗೆ ಐಜವಾಲ್‌ನ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ನೀಡಿದೆ. ಈ ಕೊಲೆ ನಡೆದಾಗ ಆತನಿಗೆ 18 ವರ್ಷ ವಯಸ್ಸಾಗಿತ್ತು. 

ಆಸ್ಸಾಂನ ಹೈಲಾಕಂಡಿ ಜಿಲ್ಲೆಯ ನಿವಾಸಿ ಆರೋಪಿ ರಾಜು ಸಮೀರ್ ದಾಸ್, ಅಕ್ಟೋಬರ್ 22 , 2012ರಂದು, ಮೀಜೋರಾಂನ ಲುಂಗ್ದೈ ಸೆಂತ್ಲಾಂಗ್ ನಿವಾಸಿ ಲಾಲಾಂಪುಜಿ (36)  ಎಂಬಾಕೆಯ ತಲೆಯ ಹಿಂಭಾಗಕ್ಕೆ ಕತ್ತಿಯಿಂದ ಹೊಡೆದು ಹತ್ಯೆ ಮಾಡಿದ್ದ ತಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್ ಥಂಗಾ ಹೇಳಿದ್ದಾರೆ. 
 
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಗ್ರಾಮದ ನಿವಾಸಿಗಳು ಆಸ್ಪತ್ರೆಗೆ ಸಾಗಿಸಿದರಾದರೂ, ಅಲ್ಲಿ ಆಕೆ ಕೊನೆಯುಸಿರೆಳೆದಳು.  ಆರೋಪಿಯನ್ನು, ಆತ ಕೊಲೆಗೆ ಬಳಸಿದ ಕತ್ತಿಯ ಜತೆಗೆ ಘಟನೆ ನಡೆದ ರಾತ್ರಿಯೇ ಬಂಧಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ