ಮಗಳ ಎದುರೇ ಅಳಿಯನನ್ನ ಕೊಂದು ಸುಟ್ಟು ಹಾಕಿದ ಮಾವ..!

ಭಾನುವಾರ, 28 ಮೇ 2017 (18:57 IST)
ಪೋಷಕರ ವಿರೋಧದ ನಡುವೆಯೂ ಮೇಲ್ಜಾತಿಯ ಯುವತಿಯನ್ನ ವಿವಾಹವಾಗಿದ್ದ ಯುವಕನನ್ನ ಕೊಂದು ಸುಟ್ಟು ಹಾಕಿರುವ ಘಟನೆ ಹೈದ್ರಾಬಾದ್`ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಿಂಗಳಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕುತ್ತಿದ್ದ ಪೋಷಕರಿಗೆ ಪೊಲೀಸರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
 

20 ವರ್ಷದ ಪತ್ನಿ ತುಮ್ಮಲ ಸ್ವಾತಿ ಫೋನ್`ನಿಂದ ಪತಿ ಅಂಬೋಜಿ ರಮೇಶ್`ಗೆ ಬಲವಂತವಾಗಿ ಕರೆ ಮಾಡಿಸಿದ ಸ್ವಾತಿ ತಂದೆ ಶ್ರೀನಿವಾಸ ರೆಡ್ಡಿ, ಮೈದಾನಕ್ಕೆ ಕರೆಸಿಕೊಂಡು ಸೊದರರ ನೆರವಿನೊಂದಿಗೆ ಸ್ವಾತಿ ಎದುರಲ್ಲೇ ನರೇಶ್`ನನ್ನ ಕೊಂದು ಸುಟ್ಟು ಹಾಕಿದ್ದಾನೆ.

`ನರೇಶ್ ನಾಪತ್ತೆ ಬಗ್ಗೆ ಸ್ವಾತಿ ತಂದೆ ಶ್ರೀನಿವಾಸ್ ಮೇಲೆ ಅನುಮಾನವಿತ್ತು. ತನಿಖೆ ವೇಳೆ ಶ್ರೀನಿವಾಸ್ ರೆಡ್ಡಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2 ತಿಂಗಮಹತ್ಯೆಳ ಹಿಂದೆ ನರೇಶ್ ಮುಂಬೈನಲ್ಲಿ ಸ್ವಾತಿಯನ್ನ ವಿವಾಹವಾಗಿದ್ದ. ಬಳಿಕ ದಂಪತಿಯನ್ನ ಪುಸಲಾಯಿಸಿ ಕರೆಸಿಕೊಂಡ ಪೋಷಕರು ನರೇಶ್ ಹತ್ಯೆಗೈದಿದ್ದಾರೆ. ಕೆಲ ದಿನಗಳ ಬಳಿಕ ಸ್ವಾತಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ