ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್ಪಾಲ್ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಪಣಜಿ ಸೆಷನ್ಸ್ ಕೋರ್ಟ್ 4.30ಕ್ಕೆ ನೀಡಲಿದೆ. ಗೋವಾ ಪೊಲೀಸರು ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದು, ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದರೆ ಪೊಲೀಸರು ಕೂಡಲೇ ಬಂಧಿಸುವ ಸಾಧ್ಯತೆಯಿದೆ ಎಂದು ಗೋವಾ ಪೊಲೀಸ್ ಮೂಲಗಳು ಖಚಿತಪಡಿಸಿವೆ.
ತನಿಖೆಗೆ ಸಹಕರಿಸುವುದಾಗಿ ತೇಜ್ಪಾಲ್ ಹೇಳಿದ್ದಾರೆ. ನ್ಯಾಯಾಧೀಶರು ತಮ್ಮ ಆದೇಶವನ್ನು ಪ್ರಕಟಿಸಿದ ನಂತರ ತರುಣ್ ತೇಜ್ಪಾಲ್ಗೆ ಬೇಲೋ, ಜೇಲೋ ಎನ್ನುವ ಕುತೂಹಲ ಕೆರಳಿಸಿದೆ. ಕೋರ್ಟ್ ಆವರಣವಂತೂ ಕಿಕ್ಕಿರಿದು ತುಂಬಿದ್ದು, ಜನರು ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ.