ಭೀಕರ ಅಪಘಾತ: ನಾಲ್ಕು ಮಕ್ಕಳು ಸೇರಿ 6 ಜನರ ದುರ್ಮರಣ

ಗುರುವಾರ, 30 ಜೂನ್ 2016 (10:16 IST)
ಆಂಧ್ರದ ಪ್ರಕಾಶಂ ಜಿಲ್ಲೆಯ ಮೇದರಮೆಟ್ಲ ಎಂಬಲ್ಲಿ ನಡೆದ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಮಕ್ಕಳು ಸೇರಿದಂತೆ ಒಟ್ಟು ಆರು ಜನರು ದುರ್ಮರಣವನ್ನಪ್ಪಿದ್ದಾರೆ. ಕಾರ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಘಟನೆ ಸಂಭವಿಸಿದೆ. 
 
ವೀರಸ್ವಾಮಿ ಎನ್ನುವವರ ಕುಟುಂಬ ತಿರುಮಲದಿಂದ ಗುಂಟೂರಿಗೆ ಸಾಗುತ್ತಿದ್ದು ಎಂದು ತಿಳಿದು ಬಂದಿದೆ. ರಸ್ತೆ ಬದಿ ನಿಂತಿದ್ದ ಕಾರ್‌ಗೆ ವೇಗವಾಗಿ ಬಂದ ಲಾರಿ ಅಪ್ಪಳಿಸಿದ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 
ಘಟನೆ ಬಳಿಕ ಕಾರ್ ಚಾಲಕ ಪರಾರಿಯಾಗಿದ್ದು ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ