ಆದರೆ, ಸಂಜಯ್ ತಿವಾರಿ ಮಾತನ್ನು ಕೇಳದೆ ಚಿಮ್ಮಾ ದೇವಾಲಯ ಪ್ರವೇಶಿಸಿದಾಗ, ಆಕ್ರೋಶಗೊಂಡ ತಿವಾರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಲ್ಲದೇ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ತಿವಾರಿ, ಚಿಮ್ಮಾ ಮತ್ತು ಆತನ ಪರಿವಾರದ ಸದಸ್ಯರಿಗೆ ದೇವಾಲಯ ಪ್ರವೇಶಸಿದಂತೆ ಎಚ್ಚರಿಕೆ ನೀಡಿದ್ದನು. ಆದರೆ, ಚಿಮ್ಮಾ ಪರಿವಾರ ಆತನ ಎಚ್ಚರಿಕೆಯನ್ನು ನಿರ್ಲಕ್ಷಿಸಿ ದೇವಾಲಯ ಪ್ರವೇಶಿಸಿದ್ದರಿಂದ ಘಟನೆ ನಡೆದಿದೆ ಎನ್ನಲಾಗಿದೆ.