ಜೈಪುರ-ಆಜ್ಮಿರ್ ಬೈಪಾಸ್ನಲ್ಲಿ ಶುಕ್ರವಾರ ಬಿಯರ್ ಪೆಟ್ಟಿಗೆಳಿಂದ ತುಂಬಿದ್ದ ಟ್ರಕ್ ಅಪಘಾತಕ್ಕೆ ಒಳಗಾಯಿತು. ಟ್ರಕ್ ಅಪಘಾತದಲ್ಲಿ ಯಾರೂ ಸಾವನ್ನಪ್ಪದಿದ್ದರೂ ಬಿಯರ್ ತುಂಬಿದ್ದ ಅನೇಕ ಪೆಟ್ಟಿಗೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ದಾರಿಹೋಕರಿಗೆ ಅದೃಷ್ಟ ಕುಲಾಯಿಸಿತು.
ಸ್ಥಳೀಯರು ಅಲ್ಲಿ ಬಿದ್ದಿದ್ದ ಬಿಯರ್ ಸೀಸೆಗಳನ್ನು ಉಚಿತ ಕೊಡುಗೆ ಎಂದು ಭಾವಿಸಿ ಕೈಗೆ ಹಿಡಿಯುವಷ್ಟು ಬಾಚಿಕೊಂಡರು. ಅವರ ಮುಖದಲ್ಲಿ ಸಂತೋಷದ ಕಳೆ ತುಂಬಿತ್ತು. ಬಿಯರ್ ಪಾರ್ಟಿ ಮಾಡುವ ಆಲೋಚನೆಯೊಂದಿಗೆ ಬಿಯರ್ ಪೆಟ್ಟಿಗೆಗಳನ್ನು ಹೊತ್ತೊಯ್ದರು.
ಅಲ್ಲಿ ನೆರದಿದ್ದವರು ಮಾತ್ರ ನಿಸ್ಸಹಾಯಕರಾಗಿ 'ಕ್ರೇಜಿ' ಗುಂಪಿನತ್ತ ನೋಡುತ್ತಿದ್ದರು. ಬಿಯರ್ ಒಯ್ಯುವವರ ಸಂಖ್ಯೆಯನ್ನು ನೋಡಿ ಅವರನ್ನು ಎದುರಿಸೋದು ಅಸಾಧ್ಯವೆಂದು ಭಾವಿಸಿದರು. ರಸ್ತೆಯಲ್ಲಿ ಬಿದ್ದಿದ್ದ ಎಲ್ಲಾ ಬಿಯರ್ ಸೀಸೆಗಳು ಖಾಲಿಯಾದ ಬಳಿಕ ಅಲ್ಲಿ ಉಳಿದಿದ್ದು, ಒಡೆದ ಗಾಜಿನ ಚೂರುಗಳು ಮಾತ್ರ.