ಬಿಗ್‌ಬಾಸ್ ಜತೆ 5 ಕೋಟಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧರಾಗಿರುವ ಆಪ್ ನಾಯಕ್ ವಿಶ್ವಾಸ್

ಮಂಗಳವಾರ, 22 ಜುಲೈ 2014 (15:22 IST)
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಕುಮಾರ್ ವಿಶ್ವಾಸ್ 'ರಾಜಕೀಯ ಜೀವನಕ್ಕೆ ಸಾರ್ವತ್ರಿಕ ಚುನಾವಣೆಯ ನಂತರ ಹಿನ್ನಡೆಯಾಗಿರಬಹುದು. ಆದರೆ ಪ್ರಸಿದ್ಧ ಹಿಂದಿ ಕವಿಯಾದ ಅವರ ಭವಿಷ್ಯವು ಹೆಚ್ಚು ಉಜ್ವಲಗೊಳ್ಳುತ್ತಿದೆ.

ವರದಿಗಳ ಪ್ರಕಾರ ಆಪ್ ನಾಯಕನಿಗೆ, ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಚಿತ್ರದ ನಿರ್ಮಾಪಕ ಎಂಡೆಮಾಲ್ ಸೆಪ್ಟೆಂಬರ್ ತಿಂಗಳಲ್ಲಿ ಪ್ರಸಾರವಾಗಲಿರುವ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ರೂ 5 ಕೋಟಿ ಪ್ರಸ್ತಾವನೆ ನೀಡಿದ್ದಾರೆ ಎಂದು ವರದಿಯಾಗಿದೆ. 
 
ಬಿಗ್ ಬಾಸ್' ತಯಾರಕರು ತಮ್ಮ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ ಎಂಬುದನ್ನು ವಿಶ್ವಾಸ್ ದೃಢಪಡಿಸಿದ್ದಾರೆ.  ಆದರೆ ಅವರು ಆ ಕುರಿತು ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದಾಗ್ಯೂ, ವರದಿಗಳ ಪ್ರಕಾರ ಮಾಜಿ ಉಪನ್ಯಾಸಕ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಇದಲ್ಲದೆ,ಆಪ್ ನಾಯಕ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲಿದ್ದಾರೆ ಮತ್ತು ಶೀಘ್ರದಲ್ಲೇ ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಮುಖ್ಯ ಕಾರ್ಯಾಲಯದಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 
 
ಸಾವಿರಾರು ಕವನಗಳನ್ನು ಬರೆದಿರುವ ವಿಶ್ವಾಸ್, ಅವರ ಒಂದು ಕವನ ಪ್ರಸಿದ್ಧ ಬಾಲಿವುಡ್  ಗಾಯಕಿ, ನಟಿ ಆಶಾ ಭೋಂಸ್ಲೆ ಅವರ ಮಧುರ ಕಂಠದಲ್ಲಿ ಮೂಡಿಬರಲಿದ್ದು ,ಅದು ಅವರ ಸಂತೋಷವನ್ನು ಇಮ್ಮಡಿಗೊಳಿಸಿದೆ. 
 
ವಿಶ್ವಾಸ್ ಅವರು ತಾವು ನಡೆಸಿಕೊಡುವ ಪ್ರದರ್ಶನದ ಶುಲ್ಕವನ್ನು ಕೂಡ ಹೆಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ