ಕೆಲ ದಿನಗಳ ಕಾಲ ಮುಂಬೈಯಿಂದ ದೂರವಿರುವಂತೆ ಪತ್ನಿ ಕಿರಣ್‌ಗೆ ಅಮೀರ್ ಖಾನ್ ಸಲಹೆ

ಬುಧವಾರ, 25 ನವೆಂಬರ್ 2015 (13:38 IST)
ಅಸಹಿಷ್ಣುತೆ ಹೇಳಿಕೆ ಕುರಿತಂತೆ ವ್ಯಾಪಕ ಟೀಕೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಕೆಲ ದಿನಗಳ ಕಾಲ ಮಕ್ಕಳೊಂದಿಗೆ ಮುಂಬೈಯಿಂದ ದೂರವಿರುವಂತೆ ಪತ್ನಿ ಕಿರಣ್‌‌ಗೆ ಬಾಲಿವುಡ್ ನಟ ಅಮೀರ್ ಖಾನ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
 
ಪತ್ನಿ ಕಿರಣ್ ರಾವ್ ಸುರಕ್ಷತೆಯ ಬಗ್ಗೆ ಕಳವಳಗೊಂಡಿದ್ದರಿಂದ ಆಕೆಯನ್ನು 2-3 ದಿನಗಳ ಕಾಲ ಮುಂಬೈಯಿಂದ ದೂರವಿರುವಂತೆ ಕೋರಿದ್ದಾಗಿ ತಿಳಿಸಿದ್ದಾರೆ. ಅಸಹಿಷ್ಣುತೆ ಬಗ್ಗೆ ಈಗಾಗಲೇ ಹೇಳಿಕೆ ನೀಡಿದ್ದರಿಂದ ವಿಷಯವನ್ನು ಮುಂದುವರಿಸದಿರಲು ಅಮೀರ್ ಖಾನ್ ನಿರ್ಧರಿಸಿದ್ದಾರೆ ಎಂದು ಅವರ ಆತ್ಮಿಯ ಮೂಲಗಳು ತಿಳಿಸಿವೆ. 
 
ಕಳೆದ ಸೋಮುವಾರದಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಕೆಲ ತಿಂಗಳುಗಳಿಂದ ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆಗಳಿಂದಾಗಿ ಅಸಹಿಷ್ಣುತೆಯ ವಾತಾವರಣವಿದ್ದು, ಕುಟುಂಬದೊಂದಿಗೆ ದೇಶವನ್ನೇ ತೊರೆಯಲು ನಿರ್ಧರಿಸಿದ್ದಾಗಿ ಅಮೀರ್ ಖಾನ್ ತಿಳಿಸಿದ್ದರು. 
 
ಮುಂಬೈನ ಸಬರ್ಬನ್ ಬಾದ್ರಾದಲ್ಲಿರುವ ಅಮೀರ್ ಖಾನ್ ನಿವಾಸದ ಮುಂದೆ ಹಿಂದೂ ಸೇನಾ ಕಾರ್ಯಕರ್ತರು ಭಾರಿ ಪ್ರತಿಭಟನೆ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಹಿಂದೂ ಸಂಘಟನೆಗಳ ಪ್ರತಿಭಟನೆಯಿಂದಾಗಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 
 
ಇದಕ್ಕಿಂತ ಮೊದಲು, ಅಸಹಿಷ್ಣುತೆ ಕುರಿತಂತೆ ದೇಶವನ್ನು ಅಪಮಾನಿಸುವ ಬಗ್ಗೆ  ಕಾಂಗ್ರೆಸ್‌ನಿಂದ ಆಳವಾದ ಸಂಚು ನಡೆದಿದೆ. ಅಮೀರ್ ಖಾನ್ ಹೇಳಿಕೆಯನ್ನು ರಾಹುಲ್ ಗಾಂಧಿ ಬೆಂಬಲಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಶಾಹನವಾಜ್ ಹುಸೈನ್ ತಿರುಗೇಟು ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ