ಕಳೆದ ಸೋಮುವಾರದಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಕೆಲ ತಿಂಗಳುಗಳಿಂದ ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆಗಳಿಂದಾಗಿ ಅಸಹಿಷ್ಣುತೆಯ ವಾತಾವರಣವಿದ್ದು, ಕುಟುಂಬದೊಂದಿಗೆ ದೇಶವನ್ನೇ ತೊರೆಯಲು ನಿರ್ಧರಿಸಿದ್ದಾಗಿ ಅಮೀರ್ ಖಾನ್ ತಿಳಿಸಿದ್ದರು.
ಇದಕ್ಕಿಂತ ಮೊದಲು, ಅಸಹಿಷ್ಣುತೆ ಕುರಿತಂತೆ ದೇಶವನ್ನು ಅಪಮಾನಿಸುವ ಬಗ್ಗೆ ಕಾಂಗ್ರೆಸ್ನಿಂದ ಆಳವಾದ ಸಂಚು ನಡೆದಿದೆ. ಅಮೀರ್ ಖಾನ್ ಹೇಳಿಕೆಯನ್ನು ರಾಹುಲ್ ಗಾಂಧಿ ಬೆಂಬಲಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಶಾಹನವಾಜ್ ಹುಸೈನ್ ತಿರುಗೇಟು ನೀಡಿದ್ದಾರೆ.