ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ, 49 ದಿನಗಳ ಕಾಲ ಆಪ್ ದೆಹಲಿಯಲ್ಲಿ ಆಡಳಿತ ನಡೆಸಿತ್ತು. ಕಳೆದ ಫೆಬ್ರುವರಿ ತಿಂಗಳಲ್ಲಿ ವಿಧಾನಸಭೆಯಲ್ಲಿ ಲೋಕಜನಪಾಲ್ ಮಸೂದೆಯನ್ನು ಪಾಸ್ ಮಾಡಲು ಸರಕಾರ ವಿಫಲವಾದುದರಿಂದ ನೊಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.
ಸರಕಾರ ದೆಹಲಿ ಜನರ ಸಮಸ್ಯೆಗಳಿಗೆ ಪರಿಹಾರ ಕೂಡ ನೀಡುತ್ತಿಲ್ಲ, ದೆಹಲಿಗೆ ಚುನಾಯಿತ ಸರಕಾರವನ್ನು ನೀಡಲು ಮಾರ್ಗವನ್ನು ಕೂಡ ತೆರವುಗೊಳಿಸುತ್ತಿಲ್ಲ. ಆದ್ದರಿಂದ ಆಪ್, ಮನೆ ಮನೆ ಪ್ರಚಾರ ನಡೆಸಿ ಜನರೇ ಚುನಾಯಿತ ಸರಕಾರಕ್ಕೆ ಒತ್ತಾಯಿಸುವಂತೆ ಮಾಡಲಿದೆ ಎಂದು ಆಪ್ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.