ದೆಹಲಿಯ ಪೂರ್ವ ಬಿಜೆಪಿ ಬೂತ್ ಉಸ್ತುವಾರಿ ವಹಿಸಿಕೊಂಡಿರುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶಾ, ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡಿ. ಪ್ರತಿ ಮತದಾರನ ಮನೆಗೆ ಹೋಗಿ ಆಪ್ನ ಸುಳ್ಳು ಭರವಸೆಗಳ ಕುರಿತು ಸ್ಪಷ್ಪಪಡಿಸಿ. ಪಕ್ಷ ದೆಹಲಿಯಲ್ಲಿ ಗೆಲ್ಲಲು ಯಶ ಕಂಡರೆ ಅದು ಸಂಪೂರ್ಣ ದೇಶದಲ್ಲಿ "ಅಜೇಯ" ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ ಎಂದು ಹೇಳಿದರು.
ಸಂಪೂರ್ಣ ದೇಶ ಮತ್ತು ವಿಶ್ವದ ಕಣ್ಣೀಗ ದೆಹಲಿ ವಿಧಾನಸಭಾ ಚುನಾವಣೆಯ ಮೇಲಿದೆ. ನಾವು ದೆಹಲಿಯಲ್ಲಿ ಗೆಲುವನ್ನು ಪಡೆದರೆ ನಮ್ಮನ್ನು ದೇಶದ ಇನ್ಯಾವುದೇ ಭಾಗಗಳಲ್ಲಿ ತಡೆಯುವವರು ಯಾರೂ ಇರಲಾರರು. ನಾವು ದೆಹಲಿ ಚುನಾವಣೆಯಲ್ಲಿ ಜಯ ಗಳಿಸಿದರೆ ಸಾಕು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಟಕ್ನಿಂದ ಕಟಕ್ವರೆಗೆ ನಮ್ಮನ್ನು ಯಾರೂ ತಡೆದು ನಿಲ್ಲಿಸಲಲಾರರು ಎಂದು ಶಾ ಅಭಿಪ್ರಾಯ ಪಟ್ಟಿದ್ದಾರೆ.