ಈ ಕುರಿತು ಪ್ರತಿಕ್ರಿಯಿಸಿರುವ ಸಮಿತಿಯ ಮುಖ್ಯಸ್ಥರಾದ ರೋಶನ್ ಲಾಲ್, "ವಾಜಪೇಯಿಯವರು ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲಾರರು ಎಂಬ ಅರಿವಿದೆ. ಆದರೆ ಅವರು ಈ ಸಮಿತಿಯ ಮೊದಲ ಮುಖ್ಯಸ್ಥರಾಗಿದ್ದರು. ಈಗಲೂ ಸಹ ಅವರು ಈ ಸಮಿತಿಯಲ್ಲಿದ್ದಾರೆ. ಹೀಗಾಗಿ ಅವರಿಗೆ ಆಹ್ವಾನ ನೀಡಲಾಗಿದೆ.ಆದರೆ ಅಡ್ವಾಣಿಯವರು ಎಂದಿಗೂ ಈ ಸಮಿತಿಯಲ್ಲಿ ಗುರುತಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಕರೆಯಲಾಗಿಲ್ಲ", ಎಂದಿದ್ದಾರೆ.
'ಮೋದಿಯವರು ಸಹ ಈ ಸಮಿತಿಯ ಸದಸ್ಯರಲ್ಲ. ಮತ್ತ್ಯಾಕೆ ಅವರನ್ನು ಆಹ್ವಾನಿಸಲಾಗಿದೆ', ಎಂದು ಮರುಪ್ರಶ್ನೆ ಹಾಕಿದ್ದಕ್ಕೆ ಉತ್ತರಿಸಿದ ರೋಶನ್, "ಮೋದಿ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ. ನಾವು ಕೇವಲ ಅವರನ್ನು ಸ್ವಾಗತಿಸಲಿದ್ದೇವೆ", ಎಂದಿದ್ದಾರೆ.