ಜಯಾಗೆ ಹೃದಯಾಘಾತ: ಹೃದಯಾಘಾತದಿಂದ ಕಾರ್ಯಕರ್ತ ಸಾವು

ಸೋಮವಾರ, 5 ಡಿಸೆಂಬರ್ 2016 (10:46 IST)
ತಮಿಳುನಾಡು ಸಿಎಂ, ಎಐಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಅವರಿಗೆ ಹೃದಯಾಘಾತವಾದ ಸುದ್ದಿ ಕೇಳಿ ಶಾಕ್ ಆದ ಅವರ ಪಕ್ಷದ ಕಾರ್ಯಕರ್ತರೊಬ್ಬರು ಹೃದಯಾಘಾತದಿಂದ ದುರ್ಮರವನ್ನಪ್ಪಿದ್ದಾರೆ.

ಮೃತ ನೀಲಕಂಠನ್ ಕಡಲೂರು ಜಿಲ್ಲೆಯ ಸನ್ಯಾಸಿಪೇಟೈ ಗ್ರಾಮದ ನಿವಾಸಿಯಾಗಿದ್ದಾನೆ. ಆತ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಜಯಾ ಅವರ ಅಭಿಮಾನಿಯಾಗಿದ್ದ ಎಂದು ತಿಳಿದುಬಂದಿದೆ. 
 
ನಿನ್ನೆ ಸಂಜೆ ದೂರದರ್ಶನದಲ್ಲಿ ಸುದ್ದಿ ವೀಕ್ಷಿಸುತ್ತಿದ್ದ ನೀಲಕಂಠನ್, ಜಯಲಲಿತಾ ಅವರಿಗೆ ಹೃದಯಾಘಾತವಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಹೃದಯಾಘಾತವಾಗಿ ಮರಣವನ್ನಪ್ಪಿದ್ದಾರೆ. 
 
ಹೀಗಾಗಿ ಸಂಪೂರ್ಣ ತಮಿಳುನಾಡು ಆತಂಕಕ್ಕೊಳಗಾಗಿದೆ. ಜಯಾ ದಾಖಲಾಗಿರುವ ಅಪೋಲೋ ಆಸ್ಪತ್ರೆಯ ಮುಂದೆ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ತಮ್ಮ ನೆಚ್ಚಿನ ನಾಯಕಿಯ ಆರೋಗ್ಯ ಸುಧಾರಣೆಗಾಗಿ ರಾಜ್ಯಾದ್ಯಂತ ಅಭಿಮಾನಿಗಳು ಪೂಜೆ ಪುನಸ್ಕಾರಗಳನ್ನು ನಡೆಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ