ಕಿಶನ್ಗಂಜ್ನಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಓವೈಸಿ, ಸೀಮಾಂಚಲ್ ಪ್ರದೇಶದ ಅಧೋಗತಿಗೆ ಕಾಂಗ್ರೆಸ್, ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ ಮತ್ತು ಬಿಹಾರ್ ಸಿಎಂ ನಿತೀಶ್ ಕುಮಾರ್ ನೇರವಾಗಿ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.
ಎನ್ಡಿಎ ಸರಕಾರದ ರಿಮೋಟ್ ಕಂಟ್ರೋಲ್ ಸಂಘಟನೆಯಾದ ಆರೆಸ್ಸೆಸ್, ಒಬಿಸಿ, ಎಸ್ಸಿ, ಎಸ್ಟಿ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ರದ್ದುಗೊಳಿಸುವ ಸಂಚು ನಡೆಸುತ್ತಿದೆ. ಸಂಘ ಪರಿವಾರ ಹೇಳಿದಂತೆ ಕೇಸರಿ ಪಕ್ಷ ನಡೆಯುತ್ತದೆ ಎಂದು ಗುಡುಗಿದರು.