ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಕಾಂಗ್ರೆಸ್ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸುತ್ತಿದ್ದಾರೆ. ಸರ್ವಪಕ್ಷಗಳ ಸಭೆಯಿಂದಾಗಿ ವಿಪಕ್ಷಗಳ ಕೋಲಾಹಲ ಅಂತ್ಯಗೊಳ್ಳುತ್ತದೆ ಎಂದು ಭಾವಿಸಿಲ್ಲ. ಆದರೆ, ಲೋಕಸಭೆಯ ಸಭಾಪತಿಯಾಗಿ ಸುಗಮವಾಗಿ ಸಂಸತ್ ಕಲಾಪ ನಡೆಸಲು ಅನುವಾಗುವಂತೆ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಕಾಂಗ್ರೆಸ್ ಸಂಸದ ಆಧಿರ್ ರಂಜನ್ ಚೌಧರಿ ಸ್ಪೀಕರ್ ಕುಳಿತಿರುವ ವೇದಿಕೆಯನ್ನು ಹತ್ತಿ ಅಸಭ್ಯವಾಗಿ ವರ್ತಿಸಿದ್ದರಿಂದ ಸಭಾಪತಿ ಮಹಾಜನ್, ಕೂಡಲೇ ಸಂಸತ್ ಹಾಲ್ನಿಂದ ಹೊರಹೋಗುವಂತೆ ಆದೇಶಿಸಿದ್ದಲ್ಲದೇ ಸಭಾಪತಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.