ಬಿಜೆಪಿಯ ಮಿತ್ರ ಪಕ್ಷಗಳಾದ ರಾಷ್ಟ್ರೀಯ ಸಮಾಜ ಪಾರ್ಟಿ, ಆರ್ಪಿಐ, ಸ್ವಾಭಿಮಾನಿ ಶೇಟ್ಕಾರಿ ಸಂಘಟನಾ ಮತ್ತು ವಿನಾಯಕ್ ಮೆಟೆ ನೇತೃತ್ವದ ಶಿವಸಂಗ್ರಾಮ್ ಪಕ್ಷಗಳು ಕೂಡಾ ಸಚಿವ ಸಂಪುಟದಲ್ಲಿ ಸ್ಥಾನಪಡೆಯಲು ಹರಸಾಹಸ ನಡೆಸುತ್ತಿವೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹೈಕಮಾಂಡ್, ಚತ್ತೀಸ್ಗಢ್ ಸಂಸದ ಸರೋಜ್ ಪಾಂಡೆಯವರನ್ನು ಮಹಾರಾಷ್ಟ್ರದ ಉಸ್ತುವಾರಿಯಾಗಿ ನೇಮಿಸಿದೆ. ಸದ್ಯ ಅಮೆರಿಕ ಪ್ರವಾಸದಲ್ಲಿರುವ ದೇವೇಂದ್ರ ಫಡ್ನವೀಸ್ ನಾಳೆ ಮುಂಬೈಗೆ ಮರಳುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.