ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಕೆಂಗಣ್ಣು...?!

ಶುಕ್ರವಾರ, 10 ಏಪ್ರಿಲ್ 2015 (11:20 IST)
ಪಕ್ಷದ ಸದಸ್ಯತ್ವವನ್ನು ವೃದ್ಧಿಸುವಲ್ಲಿ ರಾಜ್ಯ ಬಿಜೆಪಿ ಘಟಕವು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೆಂಗಣ್ಣು ಬೀರಿದ್ದಾರೆ. 
 
ಹೌದು, ಇತ್ತೀಚೆಗಷ್ಟೇ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜ್ಯ ನಾಯಕರೊಂದಿಗೆ ನಗುಮುಖದಲ್ಲಿ ಕಾಣಿಸಿಕೊಂಡಿದ್ದ ಅಮಿತ್ ಶಾ, ಪ್ರಸ್ತುತ ಕೆಂಗಣ್ಣು ಬೀರಿದ್ದಾರೆ.
 
ಅಮಿತ್ ಶಾ ಕೆಂಗಣ್ಣಿಗೆ ಕಾರಣವೇನು: ಪ್ರಸ್ತುತ ರಾಜ್ಯದಲ್ಲಿರುವ ಸದಸ್ಯತ್ವವನ್ನು ಹೊರತುಪಡಿಸಿ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಸದಸ್ಯತ್ವವು 1 ಕೋಟಿಗೆ ಏರಿಸುವಂತೆ ರಾಷ್ಟ್ರೀಯ ಬಿಜೆಪಿ ಘಟಕ ರಾಜ್ಯ ನಾಯಕರಿಗೆ ಸೂಚಿಸಿತ್ತು. ಅದರಂತೆ ರಾಜ್ಯ ನಾಯಕರೂ ಕೂಡ 60,89,000ವಾದರೂ ಏರಿಸಬೇಕೆಂದು ನಿರ್ಧಾರ ಕೈಗೊಂಡಿದ್ದರು. ಆದರೆ ಇಲ್ಲಿಯವರೆಗೂ ಕೂಡ ನಾಯಕರು ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳದೇ ಇರುವುದು ಶಾ ಕೆಂಗಣ್ಣಿಗೆ ಕಾರಣವಾಗಿದೆ ಎನ್ನಲಾಗಿದೆ. 
 
ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ಇಂದು ದಢೀರ್ ಸಭೆ ಕರೆದಿದ್ದು, ರಾಜ್ಯದ ಎಲ್ಲಾ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಸಭೆಯಲ್ಲಿ ಇನ್ನೆರಡು ತಿಂಗಳಿನಲ್ಲಿ 32ಲಕ್ಷಕ್ಕೂ ಅಧಿಕ ಸದಸ್ಯತ್ವವನ್ನು ನೋಂದಣಿ ಮಾಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗುತ್ತಿದ್ದು, ಜೋಷಿ ನೇತೃತ್ವದಲ್ಲಿ ನಗರದನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ