ತಮ್ಮ ತವರು ರಾಲೇಗಾನ್ ಸಿದ್ಧಿಯಲ್ಲಿ ಪತ್ರಕರ್ತರೊಂದಿಗೆ ಮಾತನ್ನಾಡುತ್ತಿದ್ದ ಅವರು ಪುಣೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಪ್ರಾರಂಭಿಸಿ ಮಾತನ್ನಾಡುತ್ತಿದ್ದ ಮೋದಿ ನಗರೀಕರಣ ಸಮಸ್ಯೆಯಾಗಬಾರದು ಬದಲಾಗಿ ಅವಕಾಶವಾಗಿ ಕಾಣಬೇಕು ಎಂದು ಹೇಳಿದ ಬಳಿಕ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಅಧಿಕಾರಕ್ಕೇರಿ 2 ವರ್ಷಗಳಾದರೂ ಸಹ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಲೋಕಪಾಲ್ ಮತ್ತು ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಿಸಿಲ್ಲ ಎಂದು ಸಹ ಅವರು ಪತ್ರಮುಖೇನ ಕಿಡಿಕಾರಿದ್ದಾರೆ.