ಭೂಸ್ವಾಧೀನ ಮಸೂದೆ: ಪ್ರದಾನಿ ಮೋದಿಯೊಂದಿಗೆ ಬಹಿರಂಗ ಚರ್ಚೆಗೆ ಸಿದ್ದ ಎಂದ ಹಜಾರೆ

ಗುರುವಾರ, 26 ಮಾರ್ಚ್ 2015 (16:26 IST)
ಭೂಸ್ವಾಧೀನ ಮಸೂದೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಹಿರಂಗ ಚರ್ಚೆಗೆ ಬರಲಿ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಸವಾಲ್ ಹಾಕಿದ್ದಾರೆ.

ಮಸೂದೆಯನ್ನು ವಿರೋಧಸುವವರೊಂದಿಗೆ ಕೇಂದ್ರ ಸರಕಾರ ಬಹಿರಂಗ ಚರ್ಚೆಗೆ ಸಿದ್ದವಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹಜಾರೆ, ಪ್ರಧಾನಿಯೊಂದಿಗೆ ನೇರ ಪ್ರಸಾರದಲ್ಲಿ ಚರ್ಚೆಗೆ ನಾವು ಸಿದ್ದರಿದ್ದೇವೆ. ಬಹಿರಂಗ ಚರ್ಚೆಯನ್ನು ಜನತೆ ವೀಕ್ಷಿಸಿ, ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಳಿ ಎಂದು ತಿಳಿಸಿದ್ದಾರೆ.

ಸಮಾಜ ಸುಧಾರಕ ಅಣ್ಣಾ ಹಜಾರೆ, ಎನ್‌ಡಿಎ ಸರಕಾರ ಮಂಡಿಸುತ್ತಿರುವ ಭೂ ಸ್ವಾಧೀನ ಮಸೂದೆ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ.

ಕೇಂದ್ರ ಸರಕಾರದ ಭೂ ಸ್ವಾಧೀನ ಮಸೂದೆಯನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್ ಪಕ್ಷ, ರಾಜ್ಯ ಸಭೆಯಲ್ಲಿ ಮಸೂದೆ ಪಾಸ್ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು.

ವೆಬ್ದುನಿಯಾವನ್ನು ಓದಿ