ಶಿವ...ಶಿವಾ ..ಬೆಂಗಳೂರಿನಲ್ಲಿ ಮತ್ತೊಂದು ಗ್ಯಾಂಗ್‌ರೇಪ್

ಸೋಮವಾರ, 1 ಸೆಪ್ಟಂಬರ್ 2014 (20:10 IST)
16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಆತ್ಯಾಚಾರ ನಡೆದ ಪ್ರಕರಣ ಬೆಂಗಳೂರಿನ ಹೆಬ್ಟಾಳ ಸಮೀಪ ಆನಂದನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
 
ಬಾಲಕಿಯ ಸಂಬಂಧಿಕರೇ ಆತ್ಯಾಚಾರವೆಸಗಿದ್ದಾರೆ ಎಂದು ಆತ್ಯಾಚಾರಕ್ಕೊಳಗಾದ ಬಾಲಕಿ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
 
ಆತ್ಯಾಚಾರವೆಸಗಿದ ಆರೋಪಿ ಮುನಿರಾಜುನನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರನ್ನು ಪೊಲೀಸರು ಶೋಧ ನಡೆಸುತ್ತಿದ್ದಾರೆ.
 
ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಹೆಬ್ಟಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ