ಅವರ ಚಿತಾಭಸ್ಮವನ್ನು ಸಮುದ್ರದಲ್ಲಿ ಬಿಟ್ಟು ಅವರಿಗೆ ವಿದಾಯವನ್ನು ಹೇಳಿದೆವು ಎಂದು ಡಾಕ್ಟರ್ ಅವಿನಾಶ್ ಸುಪೆ ಹೇಳಿದ್ದಾರೆ. ಅರುಣಾ ಅವರ ಅಂತಿಮ ವಿಧಿ ವಿಧಾನಗಳನ್ನು ಮಾಡುವ ಸಂದರ್ಭದಲ್ಲಿ ಅವರ ಸಂಬಂಧಿಕರು ಸಹ ಉಪಸ್ಥಿತರಿದ್ದರು. ಆಕೆಯ ಚಿತಾಭಸ್ಮವನ್ನೂ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯ ಪ್ರಕಾರ, ಸಂಬಂಧಿಕರೊಬ್ಬರು ಗೋಕರ್ಣದಲ್ಲಿ ಕೂಡ ವಿಸರ್ಜಿಸಿದರು ಎಂದು ಅವರು ತಿಳಿಸಿದ್ದಾರೆ.
ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಅರುಣಾ ಅವರ ಮೇಲೆ 1973ರ ನವೆಂಬರ್ 27 ರಂದು ಅತ್ಯಾಚಾರ ನಡೆದಿತ್ತು. ಈ ಕೃತ್ಯವೆಸಗಿದ್ದ ವಾರ್ಡ್ಬಾಯ್ ಸೋಹನ್ ಲಾಲ್ ಭಾರ್ತ ವಾಲ್ಮೀಕಿ ಆಕೆಯ ಕುತ್ತಿಗೆಗೆ ಸರಪಳಿ ಬಿಗಿದ ಪರಿಣಾ ಮೆದುಳಿಗೆ ರಕ್ತ ಪೂರೈಕೆಯಾಗದೇ ಆಕೆ ಕೋಮಾವಸ್ಥೆಗೆ ಜಾರಿದ್ದಳು. 42 ವರ್ಷಗಳ ಕಾಲ ಕೋಮಾದಲ್ಲಿದ್ದ ಅರುಣಾ ಅವರನ್ನು ಆಸ್ಪತ್ರೆಯ ಸಿಬ್ಬಂದಿಗಳು ಮುತುವರ್ಜಿಯಿಂದ ನೋಡಿಕೊಂಡಿದ್ದರು.