ತಮ್ಮ ಸ್ವಚ್ಛತಾ ಕಾರ್ಯಕ್ಕೆ ಕಡಿಮೆ ಆದಾಯದ ಪ್ರದೇಶ ಎಂದು ಕರೆಯಲಾಗುವ ದೆಹಲಿಯ ಬಿ. ಆರ್. ಕ್ಯಾಂಪ್ನ್ನು ಆಯ್ದುಕೊಂಡ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, ಪ್ರಧಾನಿ ಮೋದಿ ಕ್ಲೀನ್ ಇಂಡಿಯಾ ಅಭಿಯಾನವನ್ನು ಆರಂಭಿಸಿದ ದಿನದಂದೇ ತಾವು ಕಡೆ ಸ್ವಚ್ಚತಾ ಕಾರ್ಯಕ್ರಮವನ್ನು ಕೈಗೊಂಡರು.
ಬಿಆರ್ ಕ್ಯಾಂಪ್ ಕೇಜ್ರಿವಾಲ್ ಅವರ ದೆಹಲಿ ವಿಧಾನಸಭಾ ಕ್ಷೇತ್ರದಡಿ ಬರುತ್ತದೆ.
ಸ್ವಚ್ಛ ಭಾರತ ನಿರ್ಮಾಣದ ಗುರಿಯಲ್ಲಿ ತಮ್ಮ ಬದ್ಧತೆಯನ್ನು ತೋರಿಸುವ ಉದ್ದೇಶದಿಂದ ಎಎಪಿ ಕಾರ್ಯಕರ್ತರು ಸಹ ರಾಜಧಾನಿಯ ಹಲವಾರು ಭಾಗಗಳಲ್ಲಿ ಕಸ ಗುಡಿಸಿದರು. ಆದರೆ ಅವರು ಯಾವುದೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲವರು ಪಾಲ್ಗೊಳ್ಳಲಿಲ್ಲ.