ಪಾಂಪೋರ್ನ ಫ್ರೆಸ್ತಾಬಲ್, ದ್ರಾಂಗ್ಬಲ್, ಕಡ್ಲಾಬಲ್ ಮತ್ತು ಸೆಂಪೋರಾ ಮಸೀದಿಗಳಲ್ಲಿ ಪಾಕಿಸ್ತಾನ ಜಿಂದಾಬಾದ್, ನಮಗೆ ಸ್ವಾತಂತ್ರ್ಯ ಬೇಕು, ಉಗ್ರರ ಪವಿತ್ರ ಹೋರಾಟ ಶ್ಲಾಘನೀಯ ಎನ್ನುವ ಘೋಷಣೆಗಳನ್ನು ಮಸೀದಿಗಳ ಲೌಡ್ ಸ್ಪೀಕರ್ನಿಂದ ಹೊರಹೊಮ್ಮಿಸಲಾಯಿತು.
ಆದರೆ, ಸೇನಾಪಡೆಗಳು ಸ್ಥಳೀಯ ಯುವಕರನ್ನು ಚದುರಿಸಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಮುಂದಾದರು. ಶೆಲ್ಗಳನ್ನು ಸಿಡಿಸುವ ಮೂಲಕ ಜನರ ಗುಂಪು ಚದುರಿಸಲು ಸೇನಾಪಡೆಗಳು ಯತ್ನಿಸುತ್ತಿರುವಂತೆಯೇ ಆಕ್ರೋಶಗೊಂಡ ಸ್ಥಳೀಯ ಯುವಕರು ಸೇನಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದರು.