ಮುಜಪ್ಪರ್ನಗರ ಮತ್ತು ದಿಯೋಬಂದ್ ವಿಧಾನಸಭಾ ಕ್ಷೇತ್ರಗಳೆರಡನ್ನು ಆಡಳಿತಾರೂಢ ಸಮಾಜವಾದಿ ಪಕ್ಷ ಕಳೆದುಕೊಂಡಿದೆ. ಮುಜಪ್ಪರ್ನಗರದಲ್ಲಿ ಬಿಜೆಪಿ ಗೆದ್ದರೆ, ದಿಯೋಬಂದ್ ಕಾಂಗ್ರೆಸ್ ಪಾಲಾಗಿದೆ. ಈ ಸೋಲುಗಳು ಸಮಾಜವಾದಿ ಪಕ್ಷದ ಪಾಲಿಗೆ ಉತ್ತಮ ಸುದ್ದಿಯಲ್ಲ. ಎಸ್ಪಿ ರಾಜ್ಯದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವುದು ಈಗಾಗಲೇ ರುಜುವಾತಾಗುತ್ತಿದೆ. ಕೇವಲ ಬಿಕಾಪುರದಲ್ಲಿ ಮಾತ್ರ ಗೆಲುವನ್ನು ಸಾಧಿಸಲು ಎಸ್ಪಿ ಶಕ್ತವಾಗಿದೆ.
ಕರ್ನಾಟಕದಲ್ಲಿ ಇಂದು ಉಪಚುನಾವಣಾ ಫಲಿತಾಂಶ ಬಂದಿದ್ದು ಆಡಳಿತಾರೂಢ ಕಾಂಗ್ರೆಸ್ ಬೀದರ್ನಲ್ಲಿ ಗೆದ್ದರೆ, ಪ್ರಮುಖ ವಿರೋಧ ಪಕ್ಷ ಬಿಜೆಪಿ ಹೆಬ್ಬಾಳ ಮತ್ತು ದೇವದುರ್ಗದಲ್ಲಿ ಗೆಲುವಿನ ರುಚಿ ಕಂಡಿದೆ. ಹೆಬ್ಬಾಳ ಕ್ಷೇತ್ರವನ್ನು ಕಳೆದುಕೊಂಡಿರುವುದು ಕಾಂಗ್ರೆಸ್ಗೆ ಶಾಕ್ ತಂದಿದೆ.