ರಾಷ್ಟ್ರಪತಿ ಆಗುತ್ತಾರಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ !

ಸೋಮವಾರ, 24 ನವೆಂಬರ್ 2014 (14:39 IST)
ಕೇಂದ್ರ ಮಾನವ ಸಂಪನ್ಮೂಲ ಸಚಿವೆ, ಕಿರುತೆರೆಯ ಜನಪ್ರಿಯ ನಟಿ ಸ್ಮೃತಿ ಇರಾನಿ ಮುಂದೊಂದು ದಿನ ಈ ದೇಶದ ರಾಷ್ಟ್ರಪತಿ ಆಗುತ್ತಾರೆ ಎಂದು ರಾಜಸ್ಥಾನದ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಬಯಸಿದ ಸ್ಮೃತಿ ಭಿಲ್ವಾರಾ ಜಿಲ್ಲೆಯ ಕಾರೋಯ್ ಎಂಬ ಗ್ರಾಮದ ಪಂಡಿತ್ ನಾಥುಲಾಲ್ ವ್ಯಾಸ್ ಅವರನ್ನು ಭೇಟಿಯಾಗಿದ್ದರು. ಲೋಕಸಭೆ ಚುನಾವಣೆಗೂ ಪೂರ್ವ ಕೂಡ ಇದೇ ಜ್ಯೋತಿಷಿ ಸ್ಮೃತಿ ಇರಾನಿಗೆ ಒಳ್ಳೆಯ ಪದವಿ ಸಿಗಲಿದೆ ಎಂದು ಭವಿಷ್ಯ ಹೇಳಿದ್ದರು. ಹೀಗಾಗಿ, ಸ್ಮೃತಿ ತಮ್ಮ ಪತಿ ಜುಬಿನ್ ಇರಾನಿ ಜೊತೆ ಈ ಜ್ಯೋತಿಷಿಗೆ ಧನ್ಯವಾದ ಅರ್ಪಿಸಲು ಹೋಗಿದ್ದರು. ಆ ಸಂದರ್ಭದಲ್ಲಿ ಜ್ಯೋತಿಷಿ ನಿಮಗೆ ಭಾರತದ ರಾಷ್ಟ್ರಪತಿಯಾಗುವ ಯೋಗವಿದೆ ಎಂದು ಹೇಳಿದ್ದಾರೆ.
 
ಆದರೆ, ತನಗೆ ರಾಷ್ಟ್ರಪತಿ ಆಗುವ ಇಚ್ಛೆ ಇಲ್ಲ ಎಂದು ಇರಾನಿ ಸ್ಪಷ್ಪ ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ