ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಬಯಸಿದ ಸ್ಮೃತಿ ಭಿಲ್ವಾರಾ ಜಿಲ್ಲೆಯ ಕಾರೋಯ್ ಎಂಬ ಗ್ರಾಮದ ಪಂಡಿತ್ ನಾಥುಲಾಲ್ ವ್ಯಾಸ್ ಅವರನ್ನು ಭೇಟಿಯಾಗಿದ್ದರು. ಲೋಕಸಭೆ ಚುನಾವಣೆಗೂ ಪೂರ್ವ ಕೂಡ ಇದೇ ಜ್ಯೋತಿಷಿ ಸ್ಮೃತಿ ಇರಾನಿಗೆ ಒಳ್ಳೆಯ ಪದವಿ ಸಿಗಲಿದೆ ಎಂದು ಭವಿಷ್ಯ ಹೇಳಿದ್ದರು. ಹೀಗಾಗಿ, ಸ್ಮೃತಿ ತಮ್ಮ ಪತಿ ಜುಬಿನ್ ಇರಾನಿ ಜೊತೆ ಈ ಜ್ಯೋತಿಷಿಗೆ ಧನ್ಯವಾದ ಅರ್ಪಿಸಲು ಹೋಗಿದ್ದರು. ಆ ಸಂದರ್ಭದಲ್ಲಿ ಜ್ಯೋತಿಷಿ ನಿಮಗೆ ಭಾರತದ ರಾಷ್ಟ್ರಪತಿಯಾಗುವ ಯೋಗವಿದೆ ಎಂದು ಹೇಳಿದ್ದಾರೆ.